ರಾಜಕೀಯ ಸುದ್ದಿಗಳು

ಲೋಕದಾಳಿಯಾದರೂ ಗೋಪಿನಾಥ್ ಮತ್ತೆ ಅದೇ ಜಾಗಕ್ಕೆ!

ಸುದ್ದಿಲೈವ್/ಶಿವಮೊಗ್ಗ

ಬುಳ್ಳಾಪುರ ಸೈಟ್ ನ ವಿಷಯದಲ್ಲಿ ಲೋಕಾಯುಕ್ತ ರೈಡ್ ಆಗಿದ್ದ ಗೋಪಿನಾಥ್ ಸಮಾಜ ಕಲ್ಯಾಣ ಇಲಾಖೆಗೆ ಸಹಾಯಕ ನಿರ್ದೇಶಕರಾಗಿ ಆಗಮಿಸಿರುವ ಹಿನ್ಬಲೆಯಲ್ಲಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗ ಆಗ್ರಹಿಸಿದೆ.

ಈ ಕುರಿತು ಸುದ್ದಗೋಷ್ಠಿಯಲ್ಲಿ ಮಾತನಾಡಿದ ವಿಭಾಗದ ಆರ್.ಶಿವಣ್ಣ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಗೋಪಿನಾಥ್ ಕಾನೂನು ಬಾಹಿರವಾಗಿ ಸೆಲ್ವರಾಜ್ ಶರ್ಮಿಳಾ ಅವರ ಹೆಸರಿನಲ್ಲಿ ತೆರೆದಿರುವ ಪ್ರಕೃತಿ ಟ್ರೇಡರ್ಸ್ ಎಂಬ ಸಂಸ್ಥೆ ಸ್ಥಾಪಿಸಿಕೊಂಡು ಅದರ ಮೂಲಕವೇ ಬಿಲ್ ಕೊಟ್ಟು ಹಣ ಪಡೆದಿರುವುದಾಗಿ ಆಗ್ರಹಿಸಿದ್ದಾರೆ.

ಇದೇ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿರುವ ಉಷಾರವರು ಭ್ರಷ್ಠಾಚಾರದಲ್ಲಿ ಭಾಗಿಯಾಗಿರುವ ಆರೋಪವಿದ್ದು ಅವರವಿರುದ್ಧ ಕಾನೂನು ಕ್ರಮ‌ಕೈಗೊಳ್ಳಬೇಕೆಂದು ಶಿವಣ್ಣ ಆಗ್ರಹಿಸಿದ್ದಾರೆ.

ಕೂಡಲೇ  ಗೋಪಿನಾಥ್ ಹಾಗೂ ಉಷಾ ಇವರುಗಳನ್ನ ಸೇವೆಯಿಂದ ವಜಾಗೊಳಿಸಬೇಕು. ಕೇವಲ ಕೊಟೇಷನ್ ಮೂಲಕ  ಬಿಲ್ ಪಡೆಯುತ್ತಿರುವುದರಿಂದ ಸೇವೆಯಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ-https://suddilive.in/archives/8641

Related Articles

Leave a Reply

Your email address will not be published. Required fields are marked *

Back to top button