ಕ್ರೈಂ ನ್ಯೂಸ್

ನಕ್ಸಲ್ ನಾಯಕ ಬಿಜಿಕೆ ಪ್ರಕರಣದ ವಿಚಾರಣೆಗೆ ದಿನಾಂಕ ನಿಗದಿ

ಸುದ್ದಿಲೈವ್/ಶಿವಮೊಗ್ಗ

ನಕ್ಸಲ್ ನಾಯಕ ಬಿಜಿ ಕೃಷ್ಣ ಮೂರ್ತಿ ಅವರ ಮೇಲಿರುವ ಪ್ರಕರಣಗಳ ವಿಚಾರಣೆಗೆ ದಿನಾಂಕ ನಿಗದಿಯಾಗಿದೆ. ಬಸ್ ಸುಟ್ಟು ಹಾಕಿದ್ದ ಗೇಟ್ ಬ್ಲಾಸ್ಟ್ ಮಾಡಿದ ಹಾಗೂ ದರೋಡೆ ಪ್ರಕರಣಗಳನ್ನ ಫೆ.29 ರಂದು‌ ವಿಚಾರಣೆ ನಡೆಸಲು ದಿನಾಂಕ ನಿಗದಿ ಪಡೆದಿದೆ. ಸಾಕ್ಷಿದಾರರನ್ನ‌ ವಿಡಿಯೋ ಕಾನ್ಫೆರೆನ್ಸ್ ಮೂಲಕ ವಿಚಾರಿಸಲಾಗುತ್ತಿದೆ.

ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2007 ಮತ್ತು 2009 ರಂದು ನಡೆದೆ ಹೊಸಗದ್ದೆಯಲ್ಲಿ ಬಸ್ ಗೆ ಬೆಂಕಿ ಹಚ್ಚಿದ ಪ್ರಕರಣ, ಆಗುಂಬೆ ಅರಣ್ಯ ಗೇಟನ್ನ‌ಬ್ಲಾಸ್ಟ್ ಮಾಡಿದ ಪ್ರಕರಣ ಮತ್ತು ಅರುಣ್ ಕುಮಾರ್ ನಲ್ಲಿ ನಡೆದ ದರೋಡೆ ಪ್ರಕರಣ ಕುರಿತಂತೆ ನಿನ್ನೆ ಮತ್ತು ಇವತ್ತು ಶಿವಮೊಗ್ಗ ನ್ಯಾಯಾಲಯದಲ್ಲಿ ಆರೋಪಪಟ್ಟಿಯನ್ನ ಚಾರ್ಜ್ ಮಾಡಲಾಗಿದೆ.

ಈ ಚಾರ್ಜ್ ನ್ನ ಸುಳ್ಳು ಎಂದು ಬಿಜಿಕೆ ನ್ಯಾಯಾಧೀಶರ ಮುಂದೆ ಹೇಳಿದ್ದರಿಂದ ಮೇಲೆ ಈ ಪ್ರಕರಣಗಳ ವಿಚಾರಣೆಗೆ ಶಿವಮೊಗ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಧೀಶರು ವಿಚಾರಣೆಗೆ ದಿನಾಂಕ ನೀಡಿದ್ದಾರೆ. ಇದರಿಂದ 14 ವರಚಷಗಳ ಹಿಂದಿನ ಪ್ರಕರಣಗಳು ವಿಚಾರಣೆಗೆ ಸಿದ್ದತೆಗೊಂಡತಾಗಿದೆ.

ಬಾಡಿ ವಾರೆಂಟ್ ಮೇಲೆ ನಿನ್ನೆ ಶಿವಮೊಗ್ಗ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ನಿನ್ನೆ ಶಿವಮೊಗ್ಗ ಕಾರಾಗೃಹದಲ್ಲಿ ಆರೋಪಿಗೆ ವಸತಿ ವ್ಯವಸ್ಥೆ ಮಾಡಾಗಿತ್ತು. ಇಂದು ಸಹ ಶಿವಮೊಗ್ಗದಲ್ಲಿ ಅವರಿಗೆ ವಸತಿ ವ್ಯವಸ್ಥೆ ಮಾಡಲಾಗಿದ್ದು ನಾಳೆ ಬೆಳಿಗ್ಗೆ ಕೇರಳದ ತ್ರಿಶೂರಿಗೆ ರವಾನಿಸುವ ಸಾಧ್ಯತೆ ಇದೆ.

ಇದನ್ನೂ ಓದಿ-https://suddilive.in/archives/8156

Related Articles

Leave a Reply

Your email address will not be published. Required fields are marked *

Back to top button