ಕ್ರೈಂ ನ್ಯೂಸ್

ಸಾಮಾಜಿಕ ಬಹಿಷ್ಕಾರದ ಪ್ರಕರಣ-ಆತ್ಮಹತ್ಯೆಗೆ ಯತ್ನಿಸಿದ ವಿವಾಹಿತ ಮಹಿಳೆ

ಸುದ್ದಿಲೈವ್/ಶಿವಮೊಗ್ಗ

ಹೊರೆಬೈಲಿನಲ್ಲಿ ನಡೆದ ಸಾಮಾಜಿಕ ಬಹಿಷ್ಕಾರದ ಪ್ರಕರಣ ಹೊಸ ಟ್ವಿಸ್ಟ್ ಪಡೆದುಕೊಂಡಿದೆ. ಸಾಮಾಜಿಕ ನಿಂದನೆ ಮತ್ತು ಜಾತಿನಿಂದನೆ ಪ್ರಕರಣವನ್ನ ದಾಖಲಿಸಿದ್ದ ಪತ್ನಿ ಪ್ರೀತಿ ವಿಷ ಸೇವಿಸಿ ಆತ್ಮಹತ್ಯೆಯ ಪ್ರಯತ್ನ ಮಾಡಿಕೊಂಡಿರುವ ಘಟನೆ ನಡೆದಿದೆ.

ದಲಿತ ಯುವತಿಯನ್ನು ಪ್ರೀತಿಸಿ, ವಿವಾಹವಾದ ಯುವಕನ ಕುಟುಂಬಕ್ಕೆ ಗ್ರಾಮಸ್ಥರು ಸಾಮಾಜಿಕ ಬಹಿಷ್ಕಾರ ಹಾಕಿರುವ ಅಮಾನವೀಯ ಘಟನೆ ಶಿವಮೊಗ್ಗ ಜಿಲ್ಲೆಯ ಹೊರಬೈಲು ಗ್ರಾಮದಲ್ಲಿ ಡಿಸೆಂಬರ್ ತಿಂಗಳಲ್ಲಿ ನಡೆದಿತ್ತು.

ಜೋಗಿ ಸಮುದಾಯಕ್ಕೆ ಸೇರಿದ ಯುವಕ ಮತ್ತು ದಲಿತ ಯುವತಿ ಸೆ. 10ರಂದು ವಿವಾಹವಾಗಿದ್ದಾರು. ಅಲ್ಲದೆ, ನ.27ರಂದು ವಿವಾಹ ನೋಂದಣಿಯನ್ನೂ ಮಾಡಿದ್ದಾರೆ. ಆದರೆ, ಅವರ ವಿವಾಹದಿಂದ ಅಸಮಾಧಾನಗೊಂಡ ಸಮುದಾಯದ ಮುಖಂಡರು, ಯುವಕನ ಕುಟುಂಬಸ್ಥರೊಂದಿಗೆ ಯಾರೂ ಮಾತನಾಡಬಾರದು ಎಂದು ತಾಕೀತು ಮಾಡಿ ಸಾಮಾಜಿಕ ಬಹಿಷ್ಕಾರ ಹಾಕಿದ್ದರು.

ತಪ್ಪಿದಲ್ಲಿ 1,000 ರೂ. ದಂಡ ವಿಧಿಸುವುದಾಗಿಯೂ ಎಚ್ಚರಿಕೆ ನೀಡಿದ್ದರು ಎಂದು ಪ್ರೀತಿ ದಾಖಲಿಸಿದ್ದ ದೂರಿನಲ್ಲಿ ಉಲ್ಲೇಖವಾಗಿತ್ತು. ತಮ್ಮ ಮೇಲೆ ಹೇರಿರುವ ಬಹಿಷ್ಕಾರದ ವಿರುದ್ಧ ಯುವಕ -ಯುವತಿ ಕುಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇದಕ್ಕೆ ಬಾರಿ ವಾದ ಪ್ರತಿವಾದ ಹೊರಗೆ ಬಿದ್ದಿತ್ತು. ದೂರು ದಾಖಲಾಗಿ 1 ತಿಂಗಳ ಅಂತರದಲ್ಲಿ ಸಾಮಾಜಿಕ ಬಹಿಷ್ಕಾರ‌ದ ವಿರುದ್ಧ ಅಖಿಲ ಕರ್ನಾಟಕ ಜೋಗಿ ಸಮುದಾಯ ಅಭಿವೃದ್ಧಿ ಮಹಾಮಂಡಲ ನಾಳೆ ಹೊರೆಬೈಲಿನಿಂದ ಶಿವಮೊಗ್ಗದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಬೃಹತ್ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿತ್ತು.

ಆದರೆ ಇಂದು ಪ್ರೀತಿ ವಿಷ ಸೇವಿಸಿ ಶಿವಮೊಗ್ಗದ‌ ಮೆಗ್ಗಾನ್ ಗೆ ದಾಖಲಾಗಿದ್ದಾರೆ. ನಾಳೆ ಕಾಲ್ನಡಿಗೆ ಜಾಥಾ ನಡೆಯಲಿದೆಯಾ ಅಥವಾ ಏನಾಗಲಿದೆ ಎಂದು ಕಾದು‌ನೋಡಬೇಕಿದೆ.

ಇದನ್ನೂ ಓದಿ-https://suddilive.in/archives/8033

Related Articles

Leave a Reply

Your email address will not be published. Required fields are marked *

Back to top button