ಕ್ರೈಂ ನ್ಯೂಸ್
24 ಗಂಟೆಯಲ್ಲಿ ಮೂರು ಆತ್ಮಹತ್ಯೆ
ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದಲ್ಲಿ ಕಳೆದ 24 ಗಂಟೆಯಲ್ಲಿ ಮೂರು ಆತ್ಮಹತ್ಯೆಸಂಭವಿಸಿದೆ. ಶರಾವತಿ ನಗರ, ಕಾಶೀಪುರ ಮತ್ತು ರಾಗಿಗುಡ್ಡದಲ್ಲಿ ಆತ್ಮಹತ್ತೆ ಸುದ್ದಿ ಕೇಳಿ ಬಂದಿದೆ.
ಶೃತಿ 35 ಚರ್ಚ್ ರಸ್ತೆಯಲ್ಲಿ ಕೌಟುಂಬಿಕ ಕಲಹದ ಹಿನ್ಬಲೆಯಲ್ಲಿ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಎಡಗೈನಲ್ಲಿ ನನ್ನ ಮೃತ ದೇಹವನ್ನ ಸುಡಬೇಡಿ ಅಂಗಾಂಗ ದಾನ ಮಾಡಿ ಎಂದು ಬರೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರೂ ಸಹ ಚಿಕಿತ್ಸೆ ಫಲಕಾರಿಯಾಗದೆ ಆಕೆ ನಿನ್ನೆ ರಾತ್ರಿ ಸಾವನ್ನಪ್ಪಿದ್ದಾಳೆ
ಕಾಶೀಪುರದಲ್ಲಿ ನಂಜೇಗೌಡ ಎಂಬ 55 ವರ್ಷದ ಮನುಷ್ಯ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಂತೆ ರಾಗಿ ಗುಡ್ಡದಲ್ಲಿ ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದ ಅಬ್ದುಲ್ ಗಫೂರ್ ಮನೆಯಲ್ಲಿಯೇ ನೇಣು ಬಿಗಿದುಕೊಂಡಿದ್ದಾರೆ.
ಗಫೂರ್ ರಾಗಿಗುಡ್ಡದ ಮಸೀದಿ ಹಿಂದಿನ ಮನೆಯ ನಿವಾಸಿಯಾಗಿದ್ದಾರೆ. ಕುಡಿದ ಮತ್ತಲ್ಲಿ ನೇಣುಬಿಗಿದುಕೊಂಡಿರುವುದು ಕುಟುಂಬ ತಿಳಿಸಿದೆ.