ಪ್ರತಿಕೃತಿ ದಹಿಸಿ ಕಾಂಗ್ರೆಸ್ ಪ್ರತಿಭಟನೆ
ಸುದ್ದಿಲೈವ್/ಶಿವಮೊಗ್ಗ
ರಾಹುಲ್ ಗಾಂಧಿ ಅವರ ಭಾರತ್ ನ್ಯಾಯ ಯಾತ್ರೆಗೆ ಅಡ್ಡಿಪಡಿಸುತ್ತಿರುವ ಅಸ್ಸಾಂ ಸಿಎಂ ಹಿಮಂತ್ ಬಿಸ್ವಾಸ್ ಅವರ ಫ್ಲೆಕ್ಸ ಪೋಟೊ ದಹಿಸಿ ಇಂದು ಜಿಲ್ಲಾ ಕಾಂಗ್ರೆಸ್ ಮಹಾವೀರ ವೃತ್ತದಲ್ಲಿ ಪ್ರತಿಭಟಿಸಿದೆ.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾ ಅಧ್ಯಕ್ಷ ಹೆಚ್ ಎಸ್ ಸುಂದರೇಶ್ ಭಾರತ್ ನ್ಯಾಯ ಯಾತ್ರೆಯನ್ನ ಗೂಂಡಗಳ ಮೂಲಕ ತೊಂದರೆ ನೀಡಲಾಗುತ್ತಿದೆ. ರಾಹುಲ್ ಗಾಂಧಿ ಒಂದು ವರೆ ವರ್ಷದ ಹಿಂದೆ ಭಾರತ್ ಯಾತ್ರೆ ನಡೆಸಿದಾಗ ಕರ್ನಾಟಕದಲ್ಲಿ 136 ಸ್ಥಾನ ಪಡೆದಿದೆ.
ಈ ಹೆದರಿಕೆಯಿಂದಾಗಿ ಭಾರತ್ ನ್ಯಾಯ ಯಾತ್ರೆ ಅಡ್ಡಿಪಡಿಸಲಾಗುತ್ತಿದೆ.ಅಸ್ಸಾಂ ನಲ್ಲಿ ದೇವಸ್ಥಾನಕ್ಕೆ ಹೋಗಲು ಅಡ್ಡಿಪಡಿಸಲಾಗಿದೆ. ಲಕ್ಷಾಂತರ ಜನ ಭಾರತ್ ನ್ಯಾಯ್ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಇದಕ್ಕೆ ಹೆದರಿ ರಾಹುಲ್ ಅವರ ಯಾತ್ರೆಗೆ ಅಡ್ಡಿಪಡಿಸಲಾಗುತ್ತಿದೆ.
2024 ರಲ್ಲಿ ರಾಹುಲ್ ಪ್ರಧಾನಿ ಆಗುವುದು ನಿಶ್ಚಿತ ಎಂದು ತಿಳಿಸಿದರು. ಅಯೋದ್ಯದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಯಾವುದೇ ಪಾತ್ರ ಇಲ್ಲ. ಜವಹಾರ್ಲಾಲ್ ನೆಹರು ರಾಮಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದವರು. ಇಂದಿರಾಗಾಂಧಿ ಗೇಟ್ ಒಪನ್ಮಾಡಿದರು. ರಾಜೀವ್ ಗಾಂಧಿ ರಾಂಂದಿರ ಉದ್ಘಾಟಿಸಿದರು. ಸುಪ್ರೀಂ ಅಯೋಧ್ಯ ಮಂದಿರ ನಿರ್ಮಾಣಕ್ಕೆ ಅವಕಾಶ ನೀಡಿದೆ ಎಂದು ಹೇಳಿದರು.
ಹಾಗಾಗಿ ಅಯೋಧ್ಯ ರಾಮಮಂದಿರ ಉದ್ಘಾಟನೆಯಲ್ಲಿ ಪ್ರಧಾನಿಮೋದಿ ಕೊಡಿಗೆ ಏನು ಇಲ್ಲ. ಚುನಾವಣೆ ಗೆಲ್ಲಲು ದೇಶದ ತುಂಬ ಫ್ಲೆಕ್ಸ್ ಹಾಕಿಕೊಂಡಿದ್ದಾರೆ. 2024 ರ ರಾಹುಲ್ ಗಾಂಧಿ ಪ್ರಧಾನಿ ಆಗೋದು ನಿಶ್ಚಿತ ಎಂದು ಹೇಳಿದರು.
ಇದನ್ನೂ ಓದಿ-https://suddilive.in/archives/7509