ರಾಜಕೀಯ ಸುದ್ದಿಗಳು

ವೈರಲ್ ಆಯಿತು ಕಾಂಗ್ರೆಸ್ ಕಚೇರಿಯಲ್ಲಿ ಅಯೋಧ್ಯೆ ರಾಮಮಂದಿರ ಉದ್ಘಾಟನಾ ಫ್ಲೆಕ್ಸ್-ಬೇಳೂರು ಖಡಕ್ ಉತ್ತರ

ಸುದ್ದಿಲೈವ್/ಸಾಗರ

ಅಯೋಧ್ಯ ರಾಮ ಮಂದಿರ ಉದ್ಘಾಟನೆಗೆ ಒಂದು ದಿನ ಬಾಕಿ ಉಳಿದಿದೆ. ಕಾಂಗ್ರೆಸ್ ಪಕ್ಷ ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮ ಬಿಜೆಪಿಯ ಕಾರ್ಯಕ್ರಮ ಎಂದು ಬಿಂಬಿಸಿ ಅಂತರಕಾಪಾಡಿಕೊಂಡಿದೆ.

ಆದರೆ ಸಾಗರದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಶಾಸಕ ಗೋಪಾಲ ಕೃಷ್ಣ ಬೇಳೂರು ಜ.22 ರಂದು ರಾಮನ ಜನ್ಮ ಸ್ಥಳ ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನ ಮತ್ತು ರಾಮಮಂದಿರ ಉದ್ಘಾಟನೆ ಕಾರ್ಯಕ್ರಮ ನಡೆಯಲಿದ್ದು ನಾಡಿನ ಸುಖ-ಶಾಂತಿ ಮತ್ತು ಸಂಮೃದ್ಧಿ ಲಭಿಸಲಿ ಎಂದು ಫ್ಲೆಕ್ಸ್ ಹಾಕಿಸಿರುವ ಫೋಟೊ ವೈರಲ್ ಮಾಡಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಗೋಪಾಲ ಕೃಷ್ಣ ಬೇಳೂರು, ಇದರಲ್ಲಿ ತಪ್ಪೇನಿದೆ. ಬಿಜೆಪಿಗೆ, ಕಾಂಗ್ರೆಸ್ ಗೆ ಜನತಾದಳ ಪಕ್ಷಗಳಿಗೆ ಪ್ರತ್ಯೇಕ ರಾಮ ಇರುತ್ತಾನೆಯೇ. ರಾಮ ಎಲ್ಲರಿಗೂ ಒಂದೇ. ಒಬ್ಬ ಶಾಸಕನಾಗಿ ಜನರ ಸುಖ-ಶಾಂತಿ ನೀಡಲು ರಾಮ ದೇವರಲ್ಲಿ ಕೋರಿರುವೆ. ರಾಮನೊಂದಿಗೆ ಎಲ್ಲಾ ದೇವರ ಪೂಜೆ ಮಾಡುವುದು ನನ್ನ ಕಾಯಕ, ಇದರಲ್ಲಿ ರಾಜಕಾರಣ ಹುಡುಕುವುದು ಬೇಡ ಎಂದು ಖಡಕ್ ಮಾತು ಹೇಳಿದ್ದಾರೆ.

ಕಾಂಗ್ರೆಸ್ ನ ಅಂತರ ಮತ್ತು ಶಾಸಕ ಗೋಪಾಲ ಕೃಷ್ಣ ಬೇಳೂರು ಅವರ ಫ್ಲೆಕ್ಸ್ ವಿಷಯ ಬಿಜೆಪಿಯಲ್ಲಿ ಅಚ್ಚರಿ ಮೂಡಿಸಿದರೂ ಬೇಳೂರು ಅವರ ನಿಲುವು ಎಷ್ಟು ಸರಿ ಎಂಬುದು ಇತರರಿಗೆ ಪ್ರಶ್ನೆಯಾಗಿ ಉಳಿಯ ಬಹುದು. ಆದರೆ ಸಿಗಂದೂರು ವಿಷಯದಲ್ಲಿ ಅವರು ಶಾಸಕರಾಗದ ಸಮಯದಲ್ಲೂ ಅವರ ನಿಲುವು ಸ್ಪಷ್ಟವಾಗಿತ್ತು. ಎರಡೂ ಸಮುದಾಯವನ್ನ ಸಮಾಂತರವಾಗಿ ಕಂಡಿದ್ದರು. ಈಗ ರಾಮ ಮಂದಿರ ವಿಷಯ ಬಂದಾಗಲೂ ತಮ್ಮ ವಿರೋಧಿಗಳಿಗೆ ತಕ್ಕ ಉತ್ತರ ನೀಡಿದ್ದಾರೆ.

ಇದನ್ನೂ ಓದಿ-https://suddilive.in/archives/7321

Related Articles

Leave a Reply

Your email address will not be published. Required fields are marked *

Back to top button