ರಾಜ್ಯ ಸುದ್ದಿಗಳು

ಸಂಸದರ ಮನೆಯ ಮುಂದೆ ವಿಐಎಸ್ ಎಲ್ ಕಾರ್ಮಿಕರ ಪ್ರತಿಭಟನೆ

ಸುದ್ದಿಲೈವ್/ಶಿವಮೊಗ್ಗ

ವಿಐಎಸ್ಎಲ್ ಕಾರ್ಖಾನೆ ಉಳಿಸುವಂತೆ ಕಾರ್ಮಿಕರು ಸಂಸದ ರಾಘವೇಂದ್ರ ಅವರ ಮನೆಯ ಮುಂದೆ  ಪ್ರತಿಭಟನೆ ನಡೆಸಿದ್ದಾರೆ. ಸಂಸದರ ಮನೆಯ ರಸ್ತೆಯ ಮುಂದೆ ಬಿಸಿಲಿನಲ್ಲಿ ಕೂತು ಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ.

ಶಿವಮೊಗ್ಗ ನಗರದ ವಿನೋಬ ನಗರದಲ್ಲಿರುವ ಸಂಸದ ರಾಘವೇಂದ್ರ ಅವರ ಮನೆಯ ಮುಂದೆ  ಪ್ರತಿಭಟನೆ ನಡೆಸುತ್ತಿರುವ ಕಾರ್ಮಿಕರು‌ ಬೇಕೇ ಬೇಕು ನ್ಯಾಯ ಬೇಕು… ಉಳುಸಿ ಉಳಿಸಿ ವಿಐಎಸ್ ಎಲ್ ಉಳಿಸಿ ಎಂದು ಘೋಷಣೆ ಕೂಗಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ ಸಂಸದ ರಾಘವೇಂದ್ರ ಮನೆ ಮುಂದೆ ಪೊಲೀಸ್ ಬಿಗಿ  ಭದ್ರತೆ ನಡೆದಿದೆ. ವಿಐಎಸ್ಎಲ್ ಉಳಿಸಿ ಭದ್ರಾವತಿ ಬೆಳಸಿ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ಎರಡು ಡಿಎಆರ್ ಮತ್ತು ಕೆಎಸ್ ಆರ್ ಪಿ ತುಕಡಿಗಳನ್ನ ಸಂಸದರ ಮನೆಯ ಮುಂದೆ ನಿಯೋಜಿಸಲಾಗಿದೆ.

ಲೋಕಸಭಾ ಚುನಾವಣೆ ವೇಳೆ ಕಾರ್ಮಿಕರ ಪ್ರತಿಭಟನೆಯ ಕಾವು ಎಷ್ಟರ ಮಟ್ಟಿಗೆ ತಟ್ಟಲಿದೆ ಕಾದು ನೋಡಬೇಕಿದೆ. ವಿಐಎಸ್ಎಲ್ ಕಾರ್ಮಿಕರು ಮೊದಲೇ ಭೇಟಿಯಾಗುವುದಾಗಿ ಮಾಹಿತಿ ಇದ್ದ ಕಾರಣ ಸಂಸದರು  ಕಾದು ನಂತರ ಕಾರ್ಯಕ್ರಮಕ್ಕೆ ತೆರಳಿದ್ದಾರೆ. ಕಾರ್ಯಕ್ರಮಕ್ಕೆ ತೆರಳಿದ ನಂತರ ಕಾರ್ಮಿಕರು ಬಂದ ಪರಿಣಾಮ ಸಂಸದರು ಕಾರ್ಮಿಕರಿಗೆ ಸಿಗಲಿಲ್ಲವೆಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ-https://suddilive.in/archives/6880

Related Articles

Leave a Reply

Your email address will not be published. Required fields are marked *

Back to top button