ಆಯುಷ್ ಮಾತ್ರೆ ಭರ್ಜರಿ ಬ್ಯಾಟಿಂಗ್
ಸುದ್ದಿಲೈವ್/ಶಿವಮೊಗ್ಗ
ಯುವನಿಧಿಯ ಭರಾಟೆಯಲ್ಲಿ ಯುವ ಪ್ರತಿಭೆಗಳ ಕ್ರಿಕೆಟ್ ಮ್ಯಾಚ್ ಪಂದ್ಯಾವಳಿಗೂ ಇಂದು ಚಾಲನೆ ನೀಡಲಾಗಿದೆ. ನವುಲೆಯ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ನಮೈದಾನದಲ್ಲಿ ನಡೆದ ಕರ್ನಾಟಕ ಮತ್ತು ಮುಂಬೈ ನಡುವೆಯ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಲಾಗಿದೆ.
ಜ.15 ರ ವರೆಗೆ ನಡೆಯುವ ಈ ಪಂದ್ಯಾವಳಿ 19 ವರ್ಷದ ಒಳಗಿನ ಯುವಕರ ಆಟವಾಗಿದೆ. ಕರ್ನಾಟಕದ ತಂಡ ಇಂದು ಟಾಸ್ ಗೆದ್ದು ಬೌಲಿಂಗ್ ಆರಿಸಿಕೊಂಡಿದೆ. ಆಟದ ಆರಂಭದ ದಿನವಾದ ಇಂದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ ಭರ್ಜರಿ ಮೊತ್ತವನ್ನ ಕಲೆಹಾಕಿದೆ.
ಆಯುಷ್ವ ಮಾತ್ರೆ ಅವರ ಅಮೋಘವಾದ ಬ್ಯಾಟಿಂಗ್ ಪ್ರದರ್ಶನದಿಂದ ದಿನದ ಆಟದ ವೇಳೆ ಮುಂಬೈ ತಂಡ 328 ಕ್ಕೆ 6 ವಿಕೆಟ್ ಕಳೆದುಕೊಂಡಿದೆ. ಆರಂಭಿಕ ಆಟಗಾರನಾಗಿ ಬಂದಿದ್ದ ಆಯುಷ್ ಮಾತ್ರೆ 180 ಬಾಲುಗಳನ್ನ ಎದುರಿಸಿ 145 ರನ್ ಗಳಿಸಿದ್ದರು. 145 ರನ್ ಗಳಿಸಿದ ಮಾತ್ರೆ ಹಾರ್ದಿಕ್ ರಾಜ್ ಅವರ ಬೌಲಿಂಗ್ ಗೆ ಸಿ ಪ್ರಭಾಕರ್ ಚತುರ್ವೇದಿಗೆ ಕ್ಯಾಚಿತ್ತು ಔಟ್ವಾಗಿದ್ದಾರೆ.
ಇವರನ್ನ ಬಿಟ್ಟರೆ ಆಯುಷ್ ಸಚಿನ್ ವರ್ತಕ್ 64 ರನ್ ಗಳಿಸಿ ಔಟಾಗದೆ ಉಳಿದರೆ, ನೂತನ್ 44 ರನ್ ಗಳಿಸಿದ್ದರು. ಸಮರ್ಥ್ ಎನ್ 10 ಓವರ್ ನಲ್ಲಿ 44 ರನ್ ನೀಡಿ 2 ವಿಕೆಟ್ ಕಿತ್ತಿದ್ದಾರೆ. ಹಾರ್ದಿಕ್ ರಾಜ್ 24 ಓವರ್ ಮಾಡಿ, 59 ರನ್ ನೀಡಿ 2 ವಿಕೆಟ್ ಕಿತ್ತಿದ್ದಾರೆ.
ಇದ್ದನ್ನೂ ಓದಿ-https://suddilive.in/archives/6708