ರಾಷ್ಟ್ರೀಯ ಸುದ್ದಿಗಳು

ತೀರ್ಥಹಳ್ಳಿ ರಸ್ತೆಯಲ್ಲಿ ಕಾಡಾನೆ ಪ್ರತ್ಯಕ್ಷ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ಕಾಡಾನೆಗಳು ಸಮರ ಸಾರಿದಂತಿವೆ. ಇಷ್ಟು ದಿನ ಸಾಗರ, ಹೊಸನಗರ, ತೀರ್ಥಹಳ್ಳಿಯಲ್ಲಿ ಕಾಣಿಸಿಕೊಳ್ತಿದ್ದ ಕಾಡಾನೆಗಳು ಇವತ್ತು ಶಿವಮೊಗ್ಗ-ತೀರ್ಥಹಳ್ಳಿಯ ಹೆದ್ದಾರಿಯಲ್ಲಿಯೇ ಕಾಣಿಸಿಕೊಂಡಿವೆ. ಪರಿಣಾಮ ಸುಮಾರು ಒಂದು ಗಂಟೆಗಳ ಕಾಲ ಈ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಸಕ್ರೆಬೈಲ್ ಬಿಡಾರದ ಬಳಿ ಕಾಣಿಸಿದ ಕಾಡಾನೆ
ಶಿವಮೊಗ್ಗದ ಸಕ್ರೆಬೈಲ್ ಆನೆ ಬಿಡಾರದ ಸಮೀಪ ಸಿಗುವ ತೋಟವೊಂದರಲ್ಲಿ ಕಾಣಿಸಿಕೊಂಡ ಕಾಡಾನೆ ರೋಡಿಗೆ ಬಂದು ನಿಂತಿತ್ತು. ಹೀಗಾಗಿ ವಾಹನ ಸವಾರರು ನಿಂತಲ್ಲಿಯೇ ನಿಲ್ಲಬೇಕಾದ ಸನ್ನಿವೇಶ ಉಂಟಾಗಿತ್ತು. ಸುಮಾರು ಒಂದು ಗಂಟೆ ಕಾಲ ಟ್ರಾಫಿಕ್ ಜಾಮ್ ಆಗಿತ್ತು.

ಈ ಮಧ್ಯೆ ಸಕ್ರೆಬೈಲ್ ಆನೆಗಳ ಸಹಾಯದೊಂದಿಗೆ ಮಾವುತರು , ಕಾವಾಡಿಗಳು ಕಾಡಾನೆಯನ್ನು ಕಾಡಿಗೆ ಬೆರಸಿದರು, ರೋಡು ದಾಟಿದ ಕಾಡಾನೆ ಕಾಡಿಗೆ ತೆರಳಿದೆ. ಈ ಭಾಗದಲ್ಲಿ ಮತ್ತೆ ಕಾಡಾನೆಗಳು ರೋಡಿಗೆ ಎಂಟ್ರಿ ಕೊಡುವ ಸಾಧ್ಯತೆಗಳನ್ನ ಅಲ್ಲಗಳೆಯುವಂತಿಲ್ಲ.

ಇದನ್ನೂ ಓದಿ-https://suddilive.in/archives/5823

Related Articles

Leave a Reply

Your email address will not be published. Required fields are marked *

Back to top button