ಜಾತಿನಿಂದನೆ ಪ್ರಕರಣ ದಾಖಲಿಸಲು ಮುಂದಾದವರ ವಿರುದ್ಧ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪ್ರಕರಣ ದಾಖಲು
ಸುದ್ದಿಲೈವ್/ಶಿವಮೊಗ್ಗ
ಬಡ್ಡಿ, ಚಕ್ರ ಬಡ್ಡಿ ವಿಚಾರದಲ್ಲಿ ನಡೆದಿರುವ ಗಲಾಟೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ. ಜಾತಿ ನಿಂದನೆ ಪ್ರಕರಣಕ್ಕೂ ಮುನ್ನಾ ಡಿವೈಎಸ್ಪಿ-2 ರಿಗೆ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಘಟನೆಯೂ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಒಂದೇ ಘಟನೆ ಎರಡು ಎಫ್ಐಆರ್ ದಾಖಲಾತಿಗೆ ಕಾರಣವಾಗಿದೆ. ರಾಗಿಗುಡ್ಡದ ನಿವಾಸಿ ನಾರಾಯಣಸ್ವಾಮಿ ಅವರು ಕುಮಾರ್ ಬಳಿ 2 ಲಕ್ಷ ರೂ. ಹಣ ಸಾಲ ಪಡೆದಿದ್ದು ಈ ಸಾಲಕ್ಕೆ 02% ಮಾಸಿಕ ಧರ್ಮ ಬಡ್ಡಿ ಕಟ್ಟುವಂತೆ ಮೊದಲು ಮಾತುಕತೆಯಾಗಿದ್ದು, ಬಡ್ಡಿಕಟ್ಟಲು ಹೋದಾಗ ಕುಮಾರ ಮತ್ತು ಆತನ ತಾಯಿ ಬಾಯಿ ಮಾತಿಗೆ ಶೇ. 02 ರಷ್ಟು ಬಡ್ಡಿ ಕಟ್ಟಲು ಹೇಳಿದ್ದು, ಶೇ. 10 ರಷ್ಟು ಬಡ್ಡಿ ಕಟ್ಟಲು ತಿಳಿಸಲಾಗಿದೆ ಎಂದು ನಾರಾಯಣ ಸ್ವಾಮಿ ಎಫ್ಐಆರ್ ನಲ್ಲಿ ದಾಖಲಿಸಿದ್ದಾರೆ.
ಶೇ. 10 ರಷ್ಟು ಹಣ ಕಟ್ಟದಿದ್ದರೆ ಹೆಂಡತಿ ಮತ್ತು ಮಗಳನ್ನ ಗೂಂಡಾ ಬಿಟ್ಟು ಕೊಲೆ ಮಾಡಿಸುವುದಾಗಿ ಹೆದರಿಸಲಾಗಿದೆ. ಪ್ರಾಯಕ್ಕೆ ಬರುತ್ತಿದ್ದ ಮಗಳನ್ನ ಟಾರ್ಗೆಟ್ ಮಾಡಲಾಗಿದೆ ಎಂದು ಹೆಸರಿ 20 ಸಾವಿರ ರೂ. ಬಡ್ಡಿ ಕೊಡಲು ನಾರಾಯಣ ಸ್ವಾಮಿ ಒಪ್ಪಿಕೊಂಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪ್ರತಿ ತಿಂಗಳು ಸರಿಯಾಗಿ 20 ಸಾವಿರ ಬಡ್ಡಿ ಹಣ ಕೊಡಲು ಒಪ್ಪಿರುವುದಾಗಿಯೂ, ನಂತರದ ದಿನಗಳಲ್ಲಿ ಕುಮಾರನ ವರ್ತನೆ ಕೀಳುವರ್ತನೆಗೆ ಮುಂದಾಗಿರುವುದಾಗಿ ಆರೋಪಿಸಲಾಗಿದೆ.
ಈ ಕುರಿತಾಗಿ ಕುಲಬಾಂಧವರನ್ನ ಕರೆಯಿಸಿ ಮಾತುಕತೆ ನಡೆಸುವಾಗ ಏಕಾಏಕಿ ಬಡ್ಡಿ ನೀಡಿದ್ದ ಕುಮಾರ, ಕುಮಾರನ ತಾಯಿ ಭದ್ರಾವತಿಯ ರೌಡಿ ಗೋಪಾಲ ಮತ್ತು ಇತರೆ ನಾಲ್ಕು ಜನ ನಾರಾಯಣ ಸ್ವಾಮಿ ಅವರ ಮನೆಗೆ ನುಗ್ಗಿ ಬಡ್ಡಿ ಚಕ್ರ ಬಡ್ಡಿ ಕೊಡಲು ಆಗದಿದ್ದರೆ ಹೆಂಡತಿ ಮತ್ತು ಮಗಳ ತಲೆ ಹಿಡಿದು ಹಣ ಕೊಡುವಂತೆ ಜಾತಿ ಹಿಡಿದು ಬೈದಿರುತ್ತಾರೆ ಎಂದು ದೂರಲಾಗಿದೆ.
ಈ ವೇಳೆ ಕುಮಾರ, ನಾರಾಯಣ ಸ್ವಾಮಿಯವರ ಹೆಂಡತಿಯನ್ನ ಎಳೆದಾಡಿ ಜಡೆ ಹಿಡಿದಿರುವುದಾಗಿ ಆರೋಪಿಸಲಾಗಿದೆ. ನಾರಾಯಣ ಸ್ವಾಮಿಯ ಮೇಲೆ ಹಲ್ಲೆ ಮಾಡಿ ಜಾತಿನಿಂದನೆ ಮಾಡಿರುವುದಾಗಿ ಆರೋಪಿಸಲಾಗಿದೆ. ಪ್ರಕರಣ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಕರ್ತವ್ಯಕ್ಕೆ ಅಡ್ಡಿ ಪ್ರಕರಣ ದಾಖಲು
ಆದರೆ ಈ ಜಾತಿ ನಿಂದನೆ ಪ್ರಕರಣ ದಾಖಲಾಗುವ ಮುನ್ನಾ ಡಿವೈಎಸ್ಪಿ-2 ರ ಬಳಿ ಹೋಗಿದ್ದು ಡಿವೈಎಸ್ಪಿ ಅವರು ಜಾತಿ ನಿಂದನೆ ಕುರಿತು ನಿಮ್ಮಬಳಿ ಪ್ರತ್ಯಕ್ಷ ಸಾಕ್ಷಿ ಇದೆಯಾ ಎಂದು ಕೇಳಿದ ಪ್ರಶ್ನೆಗೆ ನಾರಾಯಣ ಸ್ವಾಮಿ ಜೊತೆ ಬಂದಿದ್ದ ಅರುಣ್ ಮತ್ತು ತಂದೆ ಪರಶುರಾಮ ಡಿವೈ ಎಸ್ಪಿ ಅವರ ಬಳಿ ಹೋಗಿ ನಾವು ನಿಮಗೆ ಸಾಕ್ಷಿಯನ್ನ ಸೃಷ್ಠಿ ಮಾಡಿಕೊಡುವುದಾಗಿ ಹಾಗೂ ನಿಮಗೆ ನೀಡಿದ ಎಫ್ಐಆರ್ ನ್ನ ಮಾತ್ರ ದಾಖಲಿಸಿಕೊಳ್ಳಿ ಎಂದು ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ಡಿವೈಎಸ್ಪಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ-https://suddilive.in/archives/7223