ಯುವತಿಯ ತವರು ಮನೆಯ ವಿರುದ್ಧವೇ ದೂರು
ಸುದ್ದಿಲೈವ್/ಶಿವಮೊಗ್ಗ
ತಂದೆಯ ಮನೆಯಿಂದ ನಾಪತ್ತೆಯಾಗಿದ್ದ ಯುವತಿಯೊಬ್ಬರು ಪ್ರೀತಿಸುತ್ತಿದ್ದ ಯುವಕನೊಂದಿಗೆ ಮದುವೆಯಾದರೂ ತವರು ಮನೆಯ ವಿರುದ್ಧವೇ ದೂರು ದಾಖಲಿಸಿದ್ದಾರೆ. ವಿಠಗೊಂಡನಕೊಪ್ಪದ ಯುವಕ ಆದರ್ಶನೊಂದಿಗೆ ಪ್ರೀತಿಸಿ ಮದುವೆಯಾಗಿದ್ದ ಯುವತಿ ತಂದೆ ರಾಮರಾವ್,
ಸತೀಶ್, ಅಣ್ಣಪ್ಪ, ಸುರೇಶ್ ಶೆಟ್ಟಿ, ಜಯರಾಮ್ ಶೆಟ್ಟಿ ಪ್ರಶಾಂತ್ ಗಡದೆ ವಿರುದ್ದ ಗರ್ಭಪಾತಕ್ಕೆ ಯತ್ನಿಸಿ ಬೇರೆ ಮದುವೆ ಮಾಡಲು ಯತ್ನಿಸುತ್ತಿರುವುದಾಗಿ ದೂರಿದ್ದಾರೆ. ಗಂಡ ಹೆಂಡತಿಯಾಗಿ ನೀತನ ಬದುಕು ಆರಂಭಿಸಿದ ಜೋಡಿಗೆ ಯುವತಿಯ ತವರು ಕುಟುಂಬ ಜೀವ ಬೆದರಿಕೆ ಹಾಕಿರುವುದಾಗಿ ದೂರಿದೆ.
ಅದರಂತೆ ಯುವಕನ ಚಿಕ್ಕಪ್ಪನವರು ರಾಮ್ ರಾವ್ ಕೋರೆ, ಅಣ್ಣಪ್ಪ, ಸತೀಶ್, ಪ್ರಶಾಂತ್ ಮತ್ತು ಮಂಜುನಾಥ್ ವಿರುದ್ಧ ದೂರು ದಾಖಲಿಸಿದ್ದಾರೆ. ನಿಂಗಪ್ಪ ಹೆಚ್ಚ ಎಸ್ ಹಾರನಹಳ್ಳಿಯ ಹೋರಿ ಹಬ್ಬ ನೋಡಲು ಹೋದಾಗ ರಾಮ್ ರಾವ್ ಕಡೆಯವರು ಏಕಾಏಕಿ ಹಲ್ಲೆಗೆ ಮುಂದಾಗಿದ್ದಾರೆ. ಹಲ್ಲೆಗೆ ಕಾರಣ ನಿಂಗಪ್ಪನವರ ಅಣ್ಣನ ಮಗ ರಾಮ್ ರಾವ್ ಕೋರೆಯವರ ಮಗಳನ್ನ ಮದುವೆಯಾಗಿದ್ದ ಕಾರಣ ದ್ವೇಷದಿಂದ ನಡೆದಿದೆ ಎಂದು ದೂರು ದಾಖಲಾಗಿದೆ.
ರಾಮ್ ರಾವ್ ಅವರ ಮಗಳು ನಿಂಗಪ್ಪನವರ ಅಣ್ಣನ ಮಗನನ್ನ ಪ್ರೀತಿಸುತ್ತಿದ್ದು ಎರಡು ತಿಂಗಳ ಹಿಂದೆ ನಾಪತ್ತೆಯಾಗಿರುವುದಾಗಿ ದೂರು ದಾಖಲಾಗಿತ್ತು. ಈಗ ಮದುವೆಯಾಗಿದ್ದಾರೆ.
ಇದನ್ನೂ ಓದಿ-https://suddilive.in/archives/4186