ಸ್ಥಳೀಯ ಸುದ್ದಿಗಳು
26/11 ರಲ್ಲಿ ಬಲಿದಾನ ಮಾಡಿದ ಯೋಧರಿಗೆ ಮತ್ತು ಪ್ರಾಂಜಲ್ವಗೆ ಶ್ರದ್ಧಾಂಜಲಿ
ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದ ಗೋಪಿ ವೃತ್ತದಲ್ಲಿ ನಗರ ಜಾತ್ಯಾತೀತ ಜನತಾದಳದ ವತಿಯಿಂದ ಜಮ್ಮು ಕಾಶ್ಮೀರದ ರಜೌರಿಯಲ್ಲಿ ಭಯೋತ್ಪಾದಕರ ವಿರುದ್ಧ ನಡೆದ ಸೇನಾ ಕಾರ್ಯಾಚರಣೆಯ ವೇಳೆ ಹುತಾತ್ಮರಾದ ವೀರಯೋಧ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಭಾರತ ದೇಶದ ಮ್ಯಾಪ್ ಗಳನ್ನ ಮೊಂಬತ್ತಿಯಲ್ಲಿ ರಚಿಸಿ ಪ್ರಾಂಜಲ್ ನ ಫೋಟೊ ಇಟ್ಟು ಶ್ರದ್ಧಾಂಜಲಿ ಅರ್ಪಿಸಲಾಯಿತು. ಈ ವೇಳೆ ಮಾತನಾಡಿದ ಮಾಜಿ ಶಾಸಕ ಹಾಗೂ ಜೆಡಿಎಸ್ ನ ಕೋರ್ ಕಮಿಟಿ ಸದಸ್ಯ ಕೆ.ಬಿ.ಪ್ರಸನ್ನ ಕುಮಾರ್ ಪ್ರಾಂಜಲ್ ಸಾಯುವ ಮುನ್ನ ಆಲ್ ಇಸ್ ವೆಲ್ ಎಂದು ಹೇಳುತ್ತಿದ್ದರು ಎಂದು ಅವರ ತಂದೆ ನೆನಪಿಸಿಕೊಂಡಿದ್ದನ್ನ ಸ್ಮರಿಸಿದರು.
ಹಾಗೂ ಕಾರ್ಯಾಚರಣೆ ವೇಳೆ ಹುತಾತ್ಮರಾದ ಎಲ್ಲಾ ವೀರ ಯೋಧರಿಗೆ ಹಾಗೂ 26/11 ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ವೀರರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮವನ್ನು ನಡೆಯಿತು. ದೀಪಕಸ್, ಹಾಗೂ ನಗರ ಜೆಡಿಎಸ್ ನ ನಾಯಕರು ಭಾಗಿಯಾಗಿದ್ದರು.