ಶೈಕ್ಷಣಿಕ ಸುದ್ದಿಗಳು

ಸಮನ್ವಯ ಟ್ರಸ್ಟ್ ಲೋಕಾರ್ಪಣೆ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ನಗರದ ಏರ್ಪೋರ್ಟ್ ರಸ್ತೆಯ ಒಡ್ಡಿನಕೊಪ್ಪ ಬಳಿ ಇರುವ ಪೋಧಾರ್ ಇಂಟರ್ನ್ಯಾಷನಲ್ ಶಾಲೆ ಬಳಿ ಸಮನ್ವಯ ಟ್ರಸ್ಟ್ ನ ವತಿಯಿಂದ ನಿರ್ಮಿಸಿರುವ ನೂತನ ಕಟ್ಟಡದ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.‌

ಶಿವಮೊಗ್ಗದ ಜಿಲ್ಲಾಧಿಕಾರಿಗಳಾಗಿದ್ದ ಕೆ.ಎ.ದಯಾನಂದ ಇವರ ಹೆಸರಿನಲ್ಲಿ ರಾಜ್ಯದ ಮೊದಲ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ವಾಚನಾಲಯ ಈ ಟ್ರಸ್ಟ್ ನಿಂದ ಆರಂಭಿಸಲಾಗಿದೆ. ಕಾರ್ಯಕ್ರಮವನ್ನ ಅವಧೂತರಾದ ಅರ್ಜುನ್ ಗುರೂಜಿಯಿಂದ ಉದ್ಘಾಟಿಸಲಾಯಿತು.

ಅಲ್ಲಮ ಜ್ಞಾನ ಮಂದಿರ ದ ಉದ್ಘಾಟನೆಯನ್ನ  ಗೊಣಿಬೀಡು ಮಠದ ಡಾ. ಸಿದ್ದಲಿಂಗ ಮಹಾಸ್ವಾಮಿಗಳು ನೆರವೇರಿಸಿದರು. ವಾಚನಾಲಯವನ್ನ ಜಿಲ್ಲಾಧಿಕಾರಿಗಳಾದ ಡಾ.ಸೆಲ್ವಮಣಿ ಲೋಕಾರ್ಪಣೆ ಮಾಡಿದರು. ಮುಖ್ಯ ಅತಿಥಿಗಳಾಗಿ ನಟಿ ಪ್ರೇಮ ಆಗಮಿಸಿದ್ದರು.

ಶಾಸಕ ಚೆನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಡಿಎಸ್ ಅರುಣ್, ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರಾದ ಮಂಜುನಾಥ ಗೌಡರು ಹಾಗೂ ಸಮನ್ವಯ ಟ್ರಸ್ಟ್ ನ ಸಮನ್ವಯ ಕಾಶಿ ಹಾಗೂ ತಂಡದವರು, ಸ್ಥಳಿಯರು ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/3673

Related Articles

Leave a Reply

Your email address will not be published. Required fields are marked *

Back to top button