ಆತ್ಮಹತ್ಯೆ ಮಾಡಿಕೊಂಡ ಸ್ಟೇಷನ್ ಮಾಷ್ಟ್ರು
ಸುದ್ದಿಲೈವ್/ಶಿವಮೊಗ್ಗ
ಕುಂಸಿ ರೈಲ್ವೆ ಸ್ಟೇಷನ್ ನಲ್ಲಿದ್ದ ರೈಲಿಗೆ ತಲೆಕೊಟ್ಟು ಆನಂದಪುರಂನ ರೈಲ್ವೆ ಸ್ಟೇಷನ್ ನ ಮಾಷ್ಟ್ರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಾಹಿತಿ ತಿಳಿದು ಬಂದಿದೆ.
ಇಂದು ಬೆಳಿಗ್ಗೆ ಬೆಂಗಳೂರಿನಿಂದ ತನ್ನ ಮಾವನ ಜೊತೆ ಬರುತ್ತಿದ್ದ ಆನಂದ ಪುರಂ ಸ್ಟೇಷನ್ ಮಾಷ್ಟ್ರು ಅರುಣ್ ಕುಮಾರ್ ಕುಂಸಿ ರೈಲ್ವೆ ನಿಲ್ದಾಣದಲ್ಲಿ ಕೆಳಗೆ ಇಳಿದು ಹೋಗಿದ್ದು, ತಾವು ತೆರಳುತ್ತಿದ್ದ ರೈಲಿಗೆ ತಲೆಕೊಟ್ಟು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ಸ್ಟೇಷನ್ ಮೇಷ್ಟ್ರ ಅವರ ಆತ್ಮಹತ್ಯೆಗೆ ಸಂಸಾರದ ಒತ್ತಡದ ಹಿನ್ನಲೆಯಲ್ಲಿ ನಡೆದಿರಬಹುದು ಎಂದು ಅಂದಾಜಿಸಲಾಗಿದೆ. ಬಿಹಾರ ಮೂಲದ ಅರುಣ್ ಕುಮಾರ್ ಐದು ದಿನ ರಜೆಯಲ್ಲಿದ್ದರು. ಐದು ದಿನದ ರಜೆಯ ನಂತರ ಇಂದು ಕೆಲಸಕ್ಕೆ ವಾಪಾಸ್ ಬರುತ್ತಿದ್ದರು. ಬರುವ ವೇಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇದರಂತೆ ರಾಜ್ಯದಲ್ಲಿ ಇಬ್ಬರು ರೈಲ್ವೆ ಸಿಬ್ಬಂದಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ರೈಲ್ವೆ ಸಿಬ್ಬಂದಿಯೋರ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇದನ್ನೂ ಓದಿ-https://suddilive.in/archives/3495