ಮತ್ತೆ ಚರ್ಚೆಗೆ ಕಾರಣವಾಯಿತು ಕುಮಾರ್ ಬಂಗಾರಪ್ಪನವರ ಪೇಜ್ ಫೋಟೊ ಅಪ್ಡೇಟ್
ಸುದ್ದಿಲೈವ್/ಶಿವಮೊಗ್ಗ
ವಸಂತ್ ಕುಮಾರ್ ಬಂಗಾರಪ್ಪನವರ ಫೇಸ್ ಬುಕ್ ನಲ್ಲಿ ಎರಡು ಬಾರಿ ಫೋಟೋ ಅಪ್ ಡೇಟ್ ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ರಾಜಕೀಯ ಚರ್ಚೆಗೆ ಕಾರಣವಾಗಿದೆ.
ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸೋತ ನಂತರ ಕೇವಲ ಸೋಷಿಯಲ್ ಮೀಡಿಯಾದಲ್ಲಿ ಕಾಣಸಿಗುತ್ತಿರುವ ವಸಂತ್ ಕುಮಾರ್ ಬಂಗಾರಪ್ಪನವರುನಿನ್ನೆ ರಾತ್ರಿ ಎರಡು ಬಾರಿ ಫೇಸ್ ಬುಕ್ ನ ಡಿಪಿಯ ಫೋಟೋವನ್ನ ಬದಲಿಸಿರುವುದು ಅವರ ಫೇಸ್ ಬುಕ್ ಪೇಜ್ ನಲ್ಲಿಯೇ ಚರ್ಚೆಗೆ ಕಾರಣವಾಗಿದೆ.
ಅವರ ಫೇಸ್ ಬುಕ್ ನ ಕುಮಾರ್ ಬಂಗಾರಪ್ಪ ಎಂಬ ಪೇಜ್ ನಲ್ಲಿ 4 ಲಕ್ಷದ 16 ಸಾವಿರ ಜನ ಫಾಲೋವರ್ಸ್ ನ್ನ ಹೊಂದಿದ್ದಾರೆ. ಕುಮಾರ್ ಬಂಗಾರಪ್ಪ ಈ ಎರಡು ಬಾರಿ ಡಿಪಿ ಬದಲಿಸಿರುವುದು ಅವರ ಅಭಿಮಾನಿಗಳಿಗೆ ಸಂತೋಷ ತಂದಿದೆ. ಮೊದಲಿಗೆ ಕೇವಲ ತಂದೆ ಜೊತೆ ಇದ್ದ ರೈತರ ಪ್ರತಿಭಟನೆಯ ಕಾರ್ಯಕ್ರಮದ ಫೋಟೊ ಹಾಕಿಕೊಂಡಿದ್ದರು ಅದರ ಬೆನ್ನಹಿಂದೆಯೇ ತಂದೆ ಬಂಗಾರಪ್ಪ, ತಾಯಿ ಶಕುಂತಲಾ, ಪತ್ನಿ ಮತ್ತು ಇಬ್ಬರು ಮಕ್ಕಳಿರುವ ಕುಟುಂಬದ ಫೋಟೊ ಹಂಚಿಕೊಂಡಿದ್ದಾರೆ.
ಇದಕ್ಕೆ ಕೆಲ ಅಭಿಮಾನಿಗಳು ಫಿದಾ ಆಗಿದ್ದಾರೆ. ಜೈ ಬಂಗಾರಪ್ಪಾಜಿ ಎಂದಿದ್ದಾರೆ. ಇನ್ನು ಕೆಲವರು ಫೋಟೋ ಅಪ್ಡೇಟ್ ಮಾಡಿದ್ದೀರಿ ಏನೋ ವಿಷಯವಿದೆ ಎಂದು ಪ್ರತಿಕ್ರಿಯಿಸಿದ್ದರೆ. ಮತ್ತೊಂದಿಷ್ಟು ಜನ ಕಾಂಗ್ರೆಸ್ ಗೆ ಬನ್ನಿ ಈ ಬಾರಿ ಅಖಾಡ ನಿಮ್ಮದೇ ಎಂದು ಹುರಿದುಂಬಿಸಿದ್ದಾರೆ. ಒಂದು ಗಂಟೆಯಲ್ಲಿ 2 ಸಾವಿರಕ್ಕೂ ಹೆಚ್ಚು ಲೈಕ್ಸ್ ಸಿಕ್ಕಿದೆ. ಇನ್ನೊಂದಿಷ್ಟು ಜನ ಚುನಾವಣೆ ಎಂದ ಮೇಲೆ ಸೋಲು ಗೆಲವು ಕಾಮನ್ ಎಂದಿದ್ದಾರೆ.
ಇನ್ನು ಚಂದ್ರಶೇಖರ್ ಹೆಂಡಗಾರ ಶಕುನವಳ್ಳಿ
ಭಾರತ ದೇಶದ ಅಪರೂಪದ ರಾಜಕಾರಣಿ ನನ್ನ ರಾಜಕೀಯ ಗುರುಗಳು ಶ್ರೀ ಎಸ್ ಬಂಗಾರಪ್ಪನವರು……. ಸರ್ ನಿಮ್ಮ ನಿರ್ಧಾರದ ಮೇಲೆ ನಮ್ಮ ಭವಿಷ್ಯ ಅಡಗಿದೆ.ಸೂಕ್ತ ಸಮಯದಲ್ಲಿ.ಉತ್ತಮ ನಿರ್ಧಾರ ತೆಗೆದುಕೊಳ್ಳಿ…ಸದಾ ಕಾಯುತ್ತಿರುವ.. ನಿಮ್ಮವನೆ ಆದ ಚಂದ್ರಶೇಖರ ಹೆಂಡಗಾರ ಶಕುನವಳ್ಳಿ ಎಂದು ಕಾಂಮೆಂಟ್ಸ್ ಮಾಡಿದ್ದಾರೆ.
ಒಟ್ಟಿನಲ್ಲಿ ಅವರ ಅಭಿಮಾನಿಗಳು ಕುಮಾರ್ ಬಂಗಾರಪ್ಪನವರನ್ನ ರಾಜಕೀಯ ಅಖಾಡಕ್ಕೆ ಇಳಿಯಲು ಉತ್ತೇಜಿಸುತ್ತಿದ್ದಾರೆ. ಲೋಕಸಭಾ ಚುನಾವಣೆ ಸಹ ಅವರ ಸುತ್ತನೇ ಸುತ್ತಿತ್ತಿದೆ. ಕುಮಾರ್ ಅವರ ನಿಲುವಿನ ಮೇಲೆ ಎರಡೂ ಪಕ್ಷದ ಭವಿಷ್ಯ ಸಹ ನಿರ್ಧಾರವಾಗುವ ಲಕ್ಷಣಗಳು ಕಂಡು ಬರುತ್ತಿದೆ. ಅವರು ಬಿಜೆಪಿಯಲ್ಲಿಯೇ ಉಳಿದರೆ ಚುನಾವಣೆ ಅಖಾಡ ಗರಿಬಿಚ್ಚೋದು ಕಷ್ಟ ಅದೇ ಕಾಂಗ್ರೆಸ್ ಗೆ ಬಂದರೆ ಅಖಾಡ ಗರಿಬಿಚ್ಚೋದು ಗ್ಯಾರೆಂಟಿ!
ಇದನ್ನೂ ಓದಿ-https://suddilive.in/archives/10282