ಸ್ಥಳೀಯ ಸುದ್ದಿಗಳು

ಸಜೀವ ದಹನ ಮಾಡಿಕೊಂಡು ದುರಂತ ಅಂತ್ಯ ಕಂಡಿದ್ದ ಕೇಕುಡ ಕುಟುಂಬದ ಪ್ರಕರಣ-ಮೂವರ ವಿರುದ್ಧ ಎಫ್ಐಆರ್

ಸುದ್ದಿಲೈವ್/ಶಿವಮೊಗ್ಗ

ಬಹಳ ಅಚ್ಚರಿ ಮತ್ತು ಆಘಾತಕ್ಕೆ ಕಾರಣವಾಗಿದ್ದ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಅರಳಸುರಳಿಯ ಬ್ರಾಹ್ಮಣ  ಕುಟುಂಬದ ಸಜೀವ ದಹನದ ಕುರಿತಂತೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಅ.08 ರಂದು ರಾಘವೇಂದ್ರ ಕೇಕುಡ, ನಾಗರತ್ನ, ಶ್ರೀರಾಮ್  ಮತ್ತು ಭರತ್ ಮನೆಯ ಕೊಠಡಿಯೊಂದರಲ್ಲಿ ಕಟ್ಟಿಗೆ ಜೋಡಿಸಿಕೊಂಡು ಸಜೀವ ದಹನಕ್ಕೆ ಮುಂದಾಗಿತ್ತು. ಈ ದುರ್ಘಟನೆಯಲ್ಲಿ ರಾಘವೇಂದ್ರ ಕೇಕುಡ, ನಾಗರತ್ನ ಹಾಗೂ ಶ್ರೀರಾಮ್ ಸಾವನ್ಬಪ್ಪಿದ್ದರು. ಎರಡು ದಿನಗಳ ಬಳಿಕ ಗಾಯಗೊಂಡಿದ್ದ ಭರತ್ ಸಹ ಸಾವನ್ಬಪ್ಪಿದ್ದನು.

ಭರತ್ ಸಾವನ್ನಪ್ಪುವವರೆಗೂ ಪ್ರಕರಣವನ್ನ ಯುಡಿಆರ್(ಅಸಹಜ ಸಾವಿನ ವರದಿ) ದಾಖಲಾಗಿತ್ತು ಎಂದು ಭಾವಿಸಲಾಗಿತ್ತು. ಆದರೆ ಭರತ್ ಸಾವಿನ ನಂತರ ರಾಘವೇಂದ್ರ ಅವರ ಪತ್ನಿಯ ಸಹೋದರನ ಹೇಳಿಕೆಯ ಮೇಲೆ ಎಫ್ಐಆರ್ ದಾಖಲಾಗಿದೆ. ಡಾ.ಸುಧೀಂದ್ರ, ಪಾರಾ ಕೃಷ್ಣಮೂರ್ತಿ ಮತ್ತು ರಾಘವೇಂದ್ರ ಅವರ ನಾದನಿ ವಿನೋದರವರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಮೇಲಿನ ಪೇಟೆ ನಿವಾಸಿ ಮತ್ತು ನಾಗರತ್ನ ರಾಘವೇಂದ್ರ ಕೇಕೋಡ ಅವರ ಕಿರಿಯ ಸಹೋದರ ತೇಜ್ ಪ್ರಕಾಶ್ ಅವರು ತಮ್ಮ ಅಕ್ಕ ನಾಗರತ್ನ, ಭಾವ ರಾಘವೇಂದ್ರ ಕೇಕುಡ, ಮಕ್ಕಳಾದ ಶ್ರೀರಾಮ ಮತ್ತು ಭರತ್ ಇವರ ಸಾವಿಗೆ ರಾಘವೇಂದ್ರ ಕೇಕುಡರ ಸಹೋದರರಾದ ಡಾ.ಸುಧೀಂದ್ರ, ಪಾರಾ ಕೃಷ್ಣಮೂರ್ತಿ ಹಾಗೂ ನಾದನಿ ವಿನೋದರಿಂದಲೇ ಸಂಭವಿಸಿದೆ ಇವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಿದ್ದಾರೆ.

ರಾಘವೇಂದ್ರ ಕೇಕುಡರಿಗೆ 1]ಕೃಷ್ಣಮೂರ್ತಿ 2]ಮಂಜುನಾಥ 3] ರಾಮಕೃಷ್ಣ, 4]ಡಾ, ಸುಧೀಂದ್ರ ಎಂಬ ನಾಲ್ವರು  ಸಹೋದರರಿದ್ದು ಇವರ ಪೈಕಿ ಮಂಜುನಾಥ ರವರು ಪೌತಿದಾರರಾಗಿದ್ದು, ಇವರ ಹೆಂಡತಿ ಶ್ರೀಮತಿ ವಿನೋದ ಆಗಿರುತ್ತಾರೆ. ಇವರಿಗೆ ಜಮೀನುಗಳಿಗೆ ಸಂಬಂಧಿಸಿದಂತೆ ಹಿಸ್ಸೆ ಯಾಗಿದ್ದು, ರಾಮಕೃಷ್ಣ ಕೇಕುಡ ಇವರು ಹಿಸ್ಸೆ ತೆಗೆದುಕೊಂಡು ಬೇರೆ ವಾಸವಾಗಿರುತ್ತಾರೆ.

ಉಳಿದ ಸಹೋದರರಾದ ಡಾ.ಸುಧೀಂದ್ರ, ಮತ್ತು ಪಾರಾ ಕೃಷ್ಣಮೂರ್ತಿ ರಾಘವೇಂದ್ರ ಕೇಕುಡರೊಂದಿಗೆ ಜಮೀನಿನ ವ್ಯವಹಾರಕ್ಕೆ ಸಂಬಂದಿಸಿದಂತೆ ಜಿಪಿಎ ಮಾಡಿಕೊಂಡಿದ್ದರು, ರಾಘವೇಂದ್ರ ಕೇಕುಡರವರು ಜಮೀನಿನ ಅಭಿವೃದ್ಧಿಗಾಗಿ ಸಾಲ ಮಾಡಿದ್ದರು, ಇವರ ಎರಡನೇ ಸಹೋದರ ಮಂಜುನಾಥ್ ಅವರ ಪತ್ನಿ ವಿನೋದ ರವರಿಗೆ ಜಮೀನಿನ ಬಾಬ್ತಾಗಿ, 10 ಲಕ್ಷ ರೂಪಾಯಿಗಳನ್ನು ರಾಘವೇಂದ್ರ ಕೇಕುಡರಿಂದ ಪಡೆದಿದ್ದರು, ಪಡೆದ ಹಣದ ಬಗ್ಗೆ ಪತ್ರ ನೊಂದಣಿಯಾಗಿರಲಿಲ್ಲ.

ಈಗ್ಗೆ ಸುಮಾರು 2 ವರ್ಷಗಳ ಹಿಂದಿನಿಂದಲೂ ಜಮೀನಿನ ಮೇಲೆ ಮಾಡಿದ ಸಾಲದ ವಿಚಾರದಲ್ಲಿ 1]ಡಾ, ಸುದೀಂದ್ರ, 2]ಪಾರಾ ಕೃಷ್ಣ ಮೂರ್ತಿ, 3] ಶ್ರೀಮತಿ ವಿನೋದ ರವರು ರಾಘವೇಂದ್ರರ ಕುಟುಂಬಕ್ಕೆ ಹಲವಾರು ಬೈದು ಹಲ್ಲೆಗೆ ಯತ್ನಿಸಿ ಗಲಾಟೆ ಮಾಡಿ ಮಾನಸಿಕ ಹಿಂಸೆ ನೀಡಿದ್ದರು.‌

ಸಾಲ ತೀರಿಸದಿದ್ದರೆ ಮನೆ ಖಾಲಿ ಮಾಡುವಂತೆ ಬೆದರಿಸಿ ಮನೆ ಖಾಲಿ ಮಾಡದಿದ್ದರೆ, ಶಿವಮೊಗ್ಗದಿಂದ ಗುಂಡಾಗಳನ್ನು ಕರೆಯಿಸಿ ಮನೆಯಿಂದ ಹೊರ ಹಾಕಿಸುವುದಾಗಿ ಹಾಗೂ ಬ್ಯಾಂಕಿನ ಸಾಲವನ್ನು ಕಟ್ಟಬೇಕೆಂದು ಬೆದರಿಸಿದ್ದರು, ಈ ವಿಚಾರದಲ್ಲಿ, ರಾಘವೇಂದ್ರ ಕುಟುಂಬ ಅವರುಗಳ ಬೆದರಿಕೆಗೆ ಮನನೊಂದು ಮಾನಸಿಕ ಹಿಂಸೆಯನ್ನು ತಡೆಯಲಾಗದೇ  ದೇಹ ತ್ಯಾಗವಾಗಿರುತ್ತದೆ ಎಂದು ತೇಜ್ವಪ್ರಕಾಶ್ ದೂರಿನಲ್ಲಿ ದಾಖಲಿಸಿದ್ದಾರೆ.

ಅದ್ದರಿಂದ  ರಾಘವೇಂದ್ರ ಕುಟುಂಬ ವರ್ಗದವರ ಮರಣಕ್ಕೆ ಕಾರಣರಾದ 1]ಡಾ, ಸುದೀಂದ್ರ, 2]ಪಾರಾ ಕೃಷ್ಣ ಮೂರ್ತಿ, 3] ಶ್ರೀಮತಿ ವಿನೋದ ರವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಡಾ.ಸುಧೀಂದ್ರ ಶಿವಮೊಗ್ಗದ ಮೆಗ್ಗಾನ್ ನಲ್ಲಿ ವೈದ್ಯರಾಗಿದ್ದಾರೆ. ಪಾರಾ ಕೃಷ್ಣಮೂರ್ತಿ ಪ್ರಭಾವಿ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ-https://suddilive.in/archives/1479

Related Articles

Leave a Reply

Your email address will not be published. Required fields are marked *

Back to top button