ಮೆಗ್ಗಾನ್ ನಲ್ಲಿ ವ್ಯಕ್ತಿ ಸಾವು-ಸಾವಿಗೆ ವೈದ್ಯರ ನಿರ್ಲಕ್ಷ ಎಂದು ಕುಟುಂಬ ಆರೋಪ
ಸುದ್ದಿಲೈವ್/ಶಿವಮೊಗ್ಗ
ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ಸರಿಯಾಗಿ ಸಿಗುತ್ತಿಲ್ಲ ಎಂಬ ಉದಾಹರಣೆಗಳು ಸಾಕಷ್ಟು ಲಭ್ಯವಾಗುತ್ತವೆ. ಅದಕ್ಕೆ ಮತ್ತೊಂದು ಪ್ರಕರಣ ದಾಖಲಾಗಿವೆ.
ನಿನ್ನೆ ಮದ್ಯಾಹ್ನ ಕೆಮ್ಮಿನಿಂದಾಗಿ ದಾಖಲಾದ ಮಾರಶೆಟ್ಟಿಗ್ರಾಮದ ನಾಗರಾಜ್ (37) ಎಂಬುವರು , ನಿನ್ನೆ ಮದ್ಯಾಹ್ನ ಮೆಗ್ಗಾನ್ಗೆ ದಾಖಲಾಗಿದ್ದಾರೆ. ಎಕ್ಸರೇ ಕರೆದೊಯ್ಯ ಉಸಿರಾಟದ ತೊಂದರೆ ಆಗ್ತಾ ಇದೆ ಎಂದು ಅಲ್ಲಿನ ಸಿಬ್ಬಂದಿಗಳಿಗೆ ಹೇಳಿದ್ದಾರೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಲಭಿಸದ ಹಿನ್ನಲೆಯಲ್ಲಿ ನಾಗರಾಜ್ ಸಾವನ್ನಪ್ಪಿದ್ದಾರೆ.
ಸಿಬ್ವಂದಿಗಳು ಮತ್ತು ವೈದ್ಯರು ಎಚ್ಚೆತ್ತುಕೊಳ್ಳದ ಹಿನ್ನಲೆಯಲ್ಲಿ ನಾಗರಾಜ್ ನಿರ್ಲಕ್ಷ ದಿಂದ ಸಾವಾಗಿರುವುದಾಗಿ ಎಂದು ಕುಟುಂಬ ಆರೋಪಿಸಿದೆ.
ನಾಗರಾಜ್ ಮಾರಶೆಟ್ಟಿ ಹಳ್ಳಿಯ ಸರ್ಕಲ್ ನಲ್ಲಿ ಟೈಲರಿಂಗ್ ಇಟ್ಟುಕೊಂಡಿದ್ದಾರೆ. ನಿನ್ಬೆ ಸಿಕ್ಕಪಟ್ಟೆ ಕೆಮ್ಮು ಕಾಣಿಸಿಕೊಂಡಿತ್ತು. ಹೊಳೆಹೊನ್ನೂರು ಆಸ್ಪತ್ರೆಗೆ ತೋರಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ ಗೆ ನಿನ್ನೆ ಕರೆತರಲಾಗಿತ್ತು.
ಇಲ್ಲಿಗೆ ಬಂದ ನಂತರ ವೈದ್ಯರು ಮತ್ತು ಸಿಬ್ಬಂದಿಗಳು ಲಭ್ಯವಾಗಿಲ್ಲ. ಪ್ರಕರಣ ದಾಖಲಿಸುವುದಾಗಿ ಅವರ ಅಳಿಯ ಆಕ್ಷೇಪಿಸಿದೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಜಿಲ್ಲಾ ಸಜ್ಜನ್ ಸಿದ್ದನಗೌಡ ಉಸಿರಾಟ ತೊಂದರೆ ಮತ್ತು ರಕ್ತದ ಸಂಬಂಧ ಕಾಯಿಲೆ ಹಿನ್ನಲೆಯಲ್ಲಿ ಮೆಗ್ಗಾನ್ ಗೆ ದಾಖಲಾಗಿದ್ದರು. ಇಂದು ಬೆಳಿಗ್ಗೆ ಸಾವಾಗಿದೆ. ವೈದ್ಯರ ನಿರ್ಲಕ್ಷದಿಂದ ಸಾವಾಗಿದೆ ಎಂದು ಮೃತರ ಕುಟುಂಬ ದೂರಿದೆ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ-https://suddilive.in/archives/10230