ರಾಜಕೀಯ ಸುದ್ದಿಗಳು

ಉಚ್ಚಾಟನೆಯ ಪತ್ರ ಬಂದಿಲ್ಲ, ಕ್ರಮಕೈಗೊಳ್ಳುವುದಾದರೆ ಕೈಗೊಳ್ಳಲಿ, ಗೆಲ್ಲೋದು ನಾನೆ-ಈಶ್ವರಪ್ಪ

ಸುದ್ದಿಲೈವ್/ಶಿವಮೊಗ್ಗ

ಬಿಜೆಪಿ ಬಂಡಾಯವಾಗಿ ಸ್ಪರ್ಧಿಸುತ್ತಿರುವ ಈಶ್ವರಪ್ಪನವರನ್ನ ರಾಜ್ಯ ಶಿಸ್ತು ಸಮಿತಿ ಪಕ್ಷದಿಂದ 6 ವರ್ಷಗಳ ವರೆಗೆ ಉಚ್ಚಾಟಿಸಿರುವ ಬೆನ್ನಲ್ಲೇ ಈಶ್ವರಪ್ಪನವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಪಕ್ಷೇತರವಾಗಿ ಸ್ಪರ್ಧಿಸುತ್ತಿರುವ ನಾನು ಪಕ್ಷ ಶುದ್ಧೀಕರಣದ ಬಗ್ಗೆ ಪ್ರಸ್ತಾಪಿಸಿ ಚುನಾವಣೆ ಅಖಾಡಕ್ಕೆ ಇಳಿದಿರುವೆ. ನನ್ನ ಸ್ಪರ್ಧೆಯನ್ನ ತಡೆಯಲು ಅನೇಕ ಪ್ರಯತ್ನಗಳು ನಡೆದವು. ಮೋದಿ ಕಾರ್ಯಕ್ರಮಕ್ಎ ಈಶ್ವರಪ್ಪನವರ ವಿರುದ್ಧ ಕ್ರಮ‌ಕೈಗೊಳ್ಳುವುದಾಗಿ ಹೇಳಲು ಬಿಂಬಿಸಿದರು‌. ಆದರೂ ಕಾರ್ಯಕ್ರಮಕ್ಕೆ ಹೋಗಲಿಲ್ಲ‌ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ವಿಜೇಂದ್ರ, ಮಾಜಿ ಸಿಎಂ ಯಡಿಯೂರಪ್ಪ, ಸಂಸದ ರಾಘವೇಂದ್ರ ಪಕ್ಷೇತರವಾಗಿ ಸ್ಪರ್ಧಿಸುವುದಕ್ಕೆ ಅವಕಾಶವಿಲ್ಲ. ಹೈಕಮಾಂಡ್ ಅವರನ್ನ ಒಪ್ಪಿಸಿ ಅವರನ್ನ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮಾಡ್ತೀವಿ ಎಂದಿದ್ದರು. ಆದರೆ ನಾನು ಯಾವುದೇ ಕ್ರಮ ಕೈಗೊಳ್ಳಲಿಲ್ಲ.

ನನ್ನನ್ನ ಬಿಜೆಪಿಯಿಂದ ಉಚ್ಚಾಟಿಸುವ ಬಗ್ಗೆ ಯಾವ ಪತ್ರವೂ ಬಂದಿಲ್ಲ. ಅವರು ಉಚ್ಚಾಟನೆ ಮಾಡಲಿ ಯಾವುದಕ್ಕೂ ಹೆದರಲ್ಲ. ಸ್ಪರ್ಧಿಸುವುದು ಸ್ಪಷ್ಟ ಗೆಲ್ಲೋದು ಖಚಿತ ಎಂದು ಈಶ್ವರಪ್ಪ ತಿಳಿಸಿದರು.‌

ಇದನ್ನೂ ಓದಿ-https://suddilive.in/archives/13440

Related Articles

Leave a Reply

Your email address will not be published. Required fields are marked *

Back to top button