ಸ್ಥಳೀಯ ಸುದ್ದಿಗಳು
ಶಿವಮೊಗ್ಗ ಲೋಕಸಭಾ ಚುನಾವಣೆಯನ್ನ ಕಾಳಿಸ್ವಾಮಿ ಧರ್ಮಯುದ್ಧಕ್ಕೆ ಹೋಲಿಕೆ
ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದಲ್ಲಿ ಕಾಳಿ ಸ್ವಾಮಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಶಿವಮೊಗ್ಗ ಲೋಕಸಭಾ ಚುನಾವಣೆಯನ್ನ ಕುರುಕ್ಷೇತ್ರ ಯುದ್ಧಕ್ಕೆ ಹೋಲಿಸಿದ್ದಾರೆ.
ಯುದ್ಧದಲ್ಲಿ ಕೃಷ್ಣ, ಅರ್ಜುನ ಮತ್ತು ಭೀಷ್ಮರನ್ನ ಹೋಲಿಸಿ ಮಾತನಾಡಿರುವ ಕಾಳಿಸ್ವಾಮಿ ಭೀಷ್ಮ ಕೃಷ್ಣನ ಭಕ್ತನಾಗಿ ಫೊಟೊ ಇಟ್ಟುಕೊಂಡು ಓಡಾಡುತ್ತಿದ್ದಾರೆ. ಯುದ್ಧದಲ್ಲಿ ಕೃಷ್ಣ ಎಲ್ಲಿದ್ದಾನೆ ಎಂದರೆ ಅಂರ್ಜುನನ ರಥದ ಮೇಲೆ ಕುಳಿತಿರುವುದಾಗಿ ಹೇಳಿದ್ದಾರೆ.
ಅರ್ಜುನ, ಕೃಷ್ಣ ಭೀಷ್ಮಯಾರೆಂದು ಮುಂದಿನ ಚುನಾವಣ ಪ್ರಚಾರದಲ್ಲಿ ಹೇಳುವುದಾಗಿ ಭರವಸೆ ನೀಡಿದ್ದಾರೆ. ಭೀಷ್ಮ ಪಕ್ಷೇತರವಾಗಿ ಸ್ಪರ್ಧಿಸುತ್ತಿದ್ದಾರೆ. ಆದರೆ ಧರ್ಮಶಾಸ್ತ್ರದ ಪರ ಚುನಾವಣೆ ನಡೆಯುತ್ತಿದೆ. ಧರ್ಮಶಾಸ್ತ್ರಗೆಲ್ಲುವುದಾಗಿ ಒಗ್ಗಾಟಾಗಿ ಹೇಳಿದ್ದಾರೆ.
ಇದರಿಂದ ಕಾಳಿಸ್ವಾಮಿಯ ಹೇಳಿಕೆ ಒಗ್ಗಾಟ್ಟಾಗಿಯೇ ಉಳಿದಿದೆ.
ಇದನ್ನೂ ಓದಿ-https://suddilive.in/archives/13073