ಕ್ರೈಂ ನ್ಯೂಸ್

ಸರ್ಕಾರಿ ಶಾಲಾ ನಿರ್ಮಾಣದ ವಿಚಾರದಲ್ಲಿ ಗಲಾಟೆ-ಐವರ ವಿರುದ್ಧ ಎಫ್ಐಆರ್

ಸುದ್ದಿಲೈವ್/ಶಿವಮೊಗ್ಗ

ಸರ್ಕಾರಿ ಉರ್ದು ಶಾಲೆಯ ಜಾಗವನ್ನ ಇಲಿಯಾಜ್ ನಗರದ ಸರ್ವೆ ನಂಬರ್ 138 ರಲ್ಲಿ ನಿರ್ಮಿಸಬೇಕೆಂದು ಇಂದು ಶಾಸಕ ಚೆನ್ನಬಸಪ್ಪ ಮತ್ತು ಬಿಇಒ ನಾಗರಾಜ್, ತಹಶೀಲ್ದಾರ್ ನಾಗರಾಜ್ ಎನ್ ಜೆ, ಜೊತೆ ಜಂಟಿ ಪರಿಶೀಲನೆಗೆ ಹೋದಾಗ ಸ್ಥಳೀಯರ ನಡುವೆ ನಡೆದ ಗಲಾಟೆ ದೊಡ್ಡಪೇಟೆ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.

ಮೊಹಮ್ಮದ್ ಮುಹೀಬ್ ಉಲ್ಲಾ, ರಿಯಾಜ್ ಅಹಮದ್, ಅಮಾನುಲ್ಲಾ ಶರೀಫ್, ಮೂವರಿಗೆ ಫಾರೀಶ್, ಎಂ.ಡಿ ಶಹೀಖ್, ಅಬ್ರರ್ ಅಹಮದ್, ಸಲೀಮ್ ಉಲ್ಲಾ ನಾಲ್ಕರಿಂದ 5 ಜನ ಸೇರಿಕೊಂಡು ಜೀವಬೆದರಿಕೆ  ಹಾಕಿರುವುದಾಗಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮೊಹಮ್ಮದ್ ಮುಹೀಬ್ ಆದ ನನಗೆ ಫಾರೀಶ್  ಎಂಬುವರು ಮುಖಕ್ಕೆ ಕೈಯಿಂದ ಮುಷ್ಟಿ ಬಿಗುದು ಹೊಡೆದು ತಲೆಗೆ ಡಿಚ್ಚಿ ಹೊಡೆದು ಹಲ್ಲೆ ಮಾಡಿದ್ದಾರೆ. ಅಲ್ಲದೆ, ಅವ್ಯಾಚ್ಯ ಶಬ್ದಗಳಿಂದ ಬೈದು ಜಾಗ ಏನು ನಿಮ್ಮಪ್ಪಂದಾ? ನಿಮಗೆ ಇದೇ ಜಮೀನಲ್ಲಿ ಗೋರಿಕಟ್ಟುತ್ತೇನೆ ಎಂದು ತಮಗೆ ಪರಿಚಿತನಿಗೆ ಕರೆ ಮಾಡಿ ದೊಣ್ಣೆ ಮಚ್ಚುಗಳು ತೆಗೆದುಕೊಂಡು ಬರೋ ಎಂದು ಸೂಚಿಸಿದ್ದಾನೆ.

ಈ ಸಂದರ್ಭದಲ್ಲಿ ತಕ್ಷಣ ಮೂವರು ಅಲ್ಲಿಂದ ಹೊರಟಾಗ ಅವರನ್ನ ಅಡ್ಡ ಹಾಕಿ ಮೊಹಮ್ಮದ್ ಮುಹೀಬ್ ಉಲ್ಲಾರಿಗೆ ಅಬ್ರರ್ ಅಹಮದ್ ಎಂಬಾತನು ನೀನು ಓಡಾಡುವ ಸಂದರ್ಭದಲ್ಲಿ ವಾಹನ ಹತ್ತಿಸಿ ಕೊಲೆ ಮಾಡುತ್ತೇನೆ ಕೆಲಸ ಮಾಡುವ ಜಾಗದಲ್ಲಿ ಬಂದು ಹೊಡೆಯುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.‌

ಮತ್ತು ರಿಯಾಜ್ ಆಹಮದ್ ರಿಗೆ ಅಮಾನುಲ್ಲಾ ಶರೀಫ್ ಎಂಬುವರು  ಇವರಿಗೆ ಇಲ್ಲೇ ಗೋರಿಕಟ್ಟೋಣ ಬರ್ರೋ ಎಂದು ಆರಿಫ್ ಉಲ್ಲಾ ಮುಖಕ್ಕೆ ಹೊಡೆದು ನಮ್ಮ ಕುಟುಂಬದಲ್ಲಿ 38 ಜನವರಿದ್ದೀವಿ ಇಬ್ರು ಜೈಲಿಗೆ ಹೋದರು ಪರವಾಗಿಲ್ಲ ಎಂದು ಆರಿಫ್ ಉಲ್ಲಾ  ಬೆದರಿಕೆ ಹಾಕಿರುವುದಾಗಿ ಎಫ್ಐಆರ್ ನಲ್ಲಿ ದೂರಲಾಗಿದೆ.

ಇದನ್ನೂ ಓದಿ-https://suddilive.in/archives/4172

Related Articles

Leave a Reply

Your email address will not be published. Required fields are marked *

Back to top button