ನಗರ‌ ಸುದ್ದಿಗಳು

ಕ್ಯಾಂಡಲ್ ಜಾಥ

ಸುದ್ದಿಲೈವ್/ಶಿವಮೊಗ್ಗ

ಲೊಕಸಭ ಚುನಾವಣೆಯಲ್ಲಿ ಜನರ ಮತದಾನದ ಬಗ್ಗೆ ಜಾಗೃತಿಗಾಗಿ ಪಾಲಿಕೆಯ ವತಿಯಿಂದ ಜಾಗೃತಿ ಮೂಡಿಸುವ ಕೆಲಸ ಮುಂದುವರೆದಿದೆ. ಇಂದು ಮತದಾನದ ಜಾಗೃತಿ ಅಂಗವಾಗಿ  ಕ್ಯಾಂಡೆಲ್ ಜಾಥ ನಡೆಸಲಾಯಿತು.

ಮಾನ್ಯ ಆಯುಕ್ತರು ಹಾಗೂ ಸಹಾಯಕ ಚುನಾವಣಾಧಿಕಾರಿಗಳು, ಶಿವಮೊಗ್ಗ 113-ವಿಧಾನ ಸಭಾ ಕ್ಷೇತ್ರ, 14-ಲೋಕಸಭಾ ಕ್ಷೇತ್ರ ರವರು ಮತದಾನ ಜಾಗೃತಿ ಕುರಿತು ಕ್ಯಾಂಡಲ್ ಜಾಥಾ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮತದಾನದ ಕುರಿತು ಅರಿವು ಮೂಡಿಸಿದರು.

ಈ ಸಂದರ್ಭದಲ್ಲಿ ಪಾಲಿಕೆಯ ಸ್ವೀಪ್ ನೋಡಲ್ ಅಧಿಕಾರಿ ಅನುಪಮಾ ಸುಪ್ರಿಯಾ ಹಾಗೂ ಸ್ವೀಪ್ ತಂಡದ ಅಧಿಕಾರಿಗಳಾದ, ರತ್ನಾಕರ್, ರೇಣು, ಗೀತಾ ಮತ್ತು ಸಿಬ್ಬಂದಿಗಳು ಹಾಜರಿದ್ದರು,  ಕ್ಯಾಂಡಲ್ ಜಾಥಾ ಗೋಪಿ ಸರ್ಕಲ್ ನೆಹರು ರಸ್ತೆ ಮಾರ್ಗವಾಗಿ ಶಿವಪ್ಪ ನಾಯಕ ಸರ್ಕಲ್ ನಲ್ಲಿ ಮುಕ್ತಾಯ ವಾಯಿತು.

ಇದನ್ನೂ ಓದಿ-https://suddilive.in/archives/12904

Related Articles

Leave a Reply

Your email address will not be published. Required fields are marked *

Back to top button