ರಾಜಕೀಯ ಸುದ್ದಿಗಳು

ಈಶ್ವರಪ್ಪ ಮೂರನೇ‌ ನಾಮಪತ್ರ ಸಲ್ಲಿಕೆ

ಸುದ್ದಿಲೈವ್/ಶಿವಮೊಗ್ಗ

ಮಾಜಿ ಡಿಸಿಎಂ ಈಶ್ವರಪ್ಪನವರು ಬಿಜೆಪಿ ಬಂಡಾಯವಾಗಿ ಸ್ಪರ್ಧಿಸುತ್ತಿದ್ದು ಮೂರನೇ ಬಾರಿಗೆ ನಾಮಪತ್ರ ಸಲ್ಲಿಸಿದ್ದಾರೆ. ಈವೇಳೆ ಕಾಂಗ್ರೆಸ್ ಅಭ್ಯರ್ಥಿ ಗೀತ ಮತ್ತುಸಚಿವ ಮಧು ಬಂಗಾರಪ್ಪ ಮುಖಾಮುಖಿಯಾಗಿದ್ದಾರೆ

ನಾಲ್ಕು ಬಾರಿ ಒಬ್ಬ ಅಭ್ಯರ್ಥಿ ನಾಮಪತ್ರ ಸಲ್ಲಿಸಲು ಅವಕಾಶವಿದ್ದು, ನಾನು ಎರಡು  ನಾಮಪತ್ರಸಲ್ಲಿಸಿದ್ದೆ. ಇಂದು ಮೂರನೇ ನಾನಪತ್ರ ಸಲ್ಲಿಸುತ್ತಿರುವೆ. ನಾನು ಗೆಲ್ಲುವುದೇ ಗ್ಯಾರೆಂಟಿ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಕಾಂಗ್ರೆಸ್ ನವರು ಮತದಾರರ ಬಳಿ ಇನ್ನೂ ಹೋಗಿಲ್ಲ. ನಾನೊಬ್ಬನೇ ಮತದಾರರ ಬಳಿ ಹೋಗ್ತಿರೋದು. ಕಾಂಗ್ರೆಸ್ ನವರು ಹೇಳ್ತಿದ್ದಾರೆ. ನಮ್ಮ ಅಭ್ಯರ್ಥಿ ಸರಿಯಿಲ್ಲ ನಿಮಗೆ ಮತಹಾಕೋದು ಎಂದು ಹೇಳ್ತಾ ಇದ್ದಾರೆ. ಕೆಲವರು ನೇರವಾಗಿ ಬೆಂಬಲಿಸುತ್ತಿದ್ದಾರೆ ಎಂದರು.

ಸೋಲಿನಭಯ ಇರುವವರು ಅಪಪ್ರಚಾರ ಮಾಡ್ತಾ ಇದ್ದಾರೆ ಎಂದು ಬಿಜೆಪಿಗರಿಗೆ ಟಾಂಟ್ ನೀಡಿದ ಅವರು, ಜನ ನನಗೆ ಅನ್ಯಾಯವಾಗಿದೆ ಎಂದು ಬೆಂಬಲಿಸುತ್ತಿದ್ದಾರೆ. ಚುನಾವಣೆ ನಿಲ್ಲೋದು ಗ್ಯಾರೆಂಟಿ, ಗೆಲ್ಲೋದು ಗ್ಯಾರೆಂಟಿ ಮೋದಿ ಕೈ ಹಿಡಿಯೋದು ಗ್ಯಾರೆಂಟಿ ಎಂದರು.

ಇದನ್ನೂ ಓದಿ-https://suddilive.in/archives/12841

Related Articles

Leave a Reply

Your email address will not be published. Required fields are marked *

Back to top button