ರಾಜಕೀಯ ಸುದ್ದಿಗಳು

ದುರ್ಗದಲ್ಲಿ ಗೋವಿಂದ ಕಾರಜೋಳ, ಶಿವಮೊಗ್ಗದಲ್ಲಿ ಈಶ್ವರಪ್ಪನವರನ್ನ ಗೆಲ್ಲಿಸುವುದೇ ನನ್ನ ಗುರಿ-ಗೂಳಿಹಟ್ಟಿ

ಸುದ್ದಿಲೈವ್/ಶಿವಮೊಗ್ಗ

10 ದಿನಗಳಿಂದ ಈಶ್ವರಪ್ಪನವರ ಜೊತೆ ಪ್ರಚಾರದಲ್ಲಿದ್ದೇನೆ. ಸ್ವಯಂ ಪ್ರೇರಿತನಾಗಿ ಅವರ ಜೊತೆ ಪ್ರಚಾರದಲ್ಲಿ ತೊಡಗಿಸಿಕೊಂಡಿರುವೆ ಎಂದು ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿಕಾರಿಪುರ, ಸೊರಬ ಮೊದಲಾದ ಕ್ಷೇತ್ರಗಳಲ್ಲಿ ಭೋವಿ ಸಮಾಜದ 60 ಸಾವಿರ ಮತಗಳಿವೆ. ಬೈಂದೂರು ಕ್ಷೇತ್ರದಲ್ಲು ನಮ್ಮ‌ಮತವಿದೆ. ನರೇಂದ್ರ ಮೋದಿ ಸಾಹೇಬರು ಮತ್ತೊಮ್ಮೆ ಪ್ರಧಾನಿ ಆಗಬೇಕು ಮತ್ತು ಈಶ್ವರಪ್ಪನವರು ಸಂಸದರಾಗಬೇಕು ಎಂಬ ಇಚ್ಛೆ ಇದೆ. ಕೆಲಸ ಮಾಡುವೆ ಎಂದರು.

ಚಿತ್ರದುರ್ಗದಲ್ಲಿ ಗೋವಿಂದ ಕಾರಜೋಳದವರಿಗೆ ನಮ್ಮ ಬೆಂಬಲವಿದೆ. ಮನೆಮನೆ ಪ್ರಚಾರ ಮಾಡುವೆ. ಸಿಂಪಥಿ ಆರಂಭವಾಗಿದೆ ಈಶ್ವರಪ್ಪನವರ ಪರವಿದೆ ಅಲೆ. ಅಲ್ಲಲ್ಲಿ ಅಪಪ್ರಚಾರವಿದೆ. ಏ.19 ರ ನಂತರ ಈಶ್ವರಪ್ಪ ಸ್ಪರ್ಧೆಯಿಂದ ವಾಪಾಸ್ ಆಗ್ತಾರೆ ಎಂಬ ಮಾತನ್ನ ಎದುರಾಳಿಗಳು ಹೇಳ್ತಾ ಇದ್ದಾರೆ. ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಈಶ್ವರಪ್ಪ ಹಿಂದೆ ಸರಿಯಲ್ಲ ಎಂದು ಸ್ಪಷ್ಟಪಡಿಸಿದರು.

ಕಾಲಿಗೆ ಬಿದ್ದು ಮತದಾರರನ್ನ ಸಂಪರ್ಕಿಸುತ್ತಿದ್ದೇವೆ. ಈ ಬಾರಿ ಈಶ್ರಪ್ಪನವರನ್ನ ಗೆಲ್ಲಿಸಿಯೇ ವಾಪಾಸ್ ದುರ್ಗಕ್ಕೆ ಹೋಗುವೆ ಎಂದರು.

ಇದನ್ನು ಓದಿ-https://suddilive.in/archives/12833

Related Articles

Leave a Reply

Your email address will not be published. Required fields are marked *

Back to top button