ನಗರ ಸುದ್ದಿಗಳು
ಈಶ್ವರಪ್ಪನವರ ವಿರುದ್ಧ ಅಪಪ್ರಚಾರ-ಗೂಳಿಹಟ್ಟಿ ಶೇಖರ್ ಹೇಳಿಕೆ
ಸುದ್ದಿಲೈವ್/ಶಿವಮೊಗ್ಗ
ಈಶ್ವರಪ್ಪನವರ ವಿರುದ್ಧ ಅಪಪ್ರಚಾರವಾಗುತ್ತಿದೆ ಎಂದು ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಹೇಳಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿ, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕೆ.ಎಸ್.ಈಶ್ವರಪ್ಪರವರಿಗೆ ಎಲ್ಲಾ ಜಾತಿ ಸಮುದಾಯಗಳ ಬೆಂಬಲ ಸಿಗುತ್ತಿದೆ. ಈಶ್ವರಪ್ಪರ ಮುಖ್ಯ ಉದ್ದೇಶ ನರೇಂದ್ರ ಮೋದಿಯವರನ್ನು ಬೆಂಬಲಿಸುವುದು ಎಂದರು.
ನಾಮ ಪತ್ರ ಸಲ್ಲಿಕೆಯ ನಂತರ ಬಿಜೆಪಿ ಕಾಂಗ್ರೆಸ್ ಪಕ್ಷದಿಂದ ಮುಕ್ಕಾಲು ಭಾಗ ಕಾರ್ಯಕರ್ತರು ಈಶ್ವರಪ್ಪರ ಬೆಂಬಲಕ್ಕೆ ಬರಲಿದ್ದಾರೆ. ಈಶ್ವರಪ್ಪ ವಿರುದ್ಧ ಅಪಪ್ರಚಾರ ನಡೆಯುತ್ತಿದೆ ಈಶ್ವರಪ್ಪ ರ ಬಗ್ಗೆ ಅಪಪ್ರಚಾರ ಮಾಡಬೇಡಿ ಸಾರ್ವಜನಿಕರಲ್ಲಿ ಮೂಡಿಸಬೇಡಿ ಎಂದು ಅಪಪ್ರಚಾರ ಮಾಡುವವರಿಗೆ ಮನವಿ ಮಾಡುತ್ತೇನೆ ಎಂದರು.
ಇದನ್ನೂ ಓದಿ-https://suddilive.in/archives/12307