ಸ್ಥಳೀಯ ಸುದ್ದಿಗಳು
ಕುಮಧ್ವತಿ ನದಿಯ ಸೇತುವೆ ಮೇಲೆ ಟ್ಯಾಂಕರ್ ಮತ್ತು ಕಾರಿನ ನಡುವೆ ಅಪಘಾತ
ಸುದ್ದಿಲೈವ್/ಶಿಕಾರಿಪುರ
ಶಿಕಾರಿಪುರ ಮತ್ತು ಶಿರಾಳಕೊಪ್ಪದ ನಡುವಿನ ಕುಮಧ್ವತಿ ನದಿ ಸೇತವೆಯ ಮೇಲೆ ಟ್ಯಾಂಕರ್ ಮತ್ತು ಇನ್ನೋವಾ ಕಾರಿನ ನಡುವೆ ಡಿಕ್ಕಿ ಉಂಟಾಗಿದ್ದು, ಇನ್ನೋವಾ ಕಾರಿನ ಮುಂಭಾಗ ಸಂಪೂರ್ಣ ನುಜ್ಜು ಗುಜ್ಜಾಗಿದೆ.
ಶಿರಾಳಕೊಪ್ಪದ ಕಡೆಯಿಂದ ಶಿಕಾರಿಪುರದ ಕಡೆಗೆ ಹೋಗುತ್ತಿದ್ದ ಟ್ಯಾಂಕರ್ ಮತ್ತು ಬೆಂಗಳೂರಿನ ಕಡೆಯಿಂದ ಅಥಣಿಗೆ ಹೋಗುತ್ತಿದ್ದ ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಸಾವುನೋವಾಗಿರುವ ಬಗ್ಗೆ ವರದಿ ತಿಳಿದು ಬರಬೇಕಿದೆ.
ಬ್ಲಾಕ್ ಇನ್ನೋವಾ ಕಾರಿನ ಮುಂಭಾಗ ನುಜ್ಜುಗುಜ್ಜಾಗಿದೆ. ಪ್ರಕರಣ ಶಿಕಾರಿಪುರ ಠಾಣ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ-https://suddilive.in/archives/12558