ದಿನೇಶ್ ಗುಂಡೂರಾವ್ ಸಚಿವರಾಗಿ ಹೀಗೆ ಮಾತನಾಡಬಾರದಿತ್ತು- ಆರಗ
ಸುದ್ದಿಲೈವ್/ಶಿವಮೊಗ್ಗ
ಬೆಂಗಳೂರಿನ ರಾಮೇಶ್ವರಂ ಬಾಂಬ್ ಬ್ಲಾಸ್ಟ್ ಕೇಸ್ ಪ್ರಕರಣದಲ್ಲಿ ತೀರ್ಥಹಳ್ಳಿಯ ಇಬ್ಬರು ಅದರಲ್ಲಿ ಪ್ರಕರಣ ಭಾಗಿಯಾಗಿದ್ದು, ಎನ್ ಐ ಎ ತಂಡ ಬಿಜೆಪಿಯ ಕಾರ್ಯ ಕರ್ತ ಸಾಯಿ ಪ್ರಸಾದ್ ಮತ್ತು ಅವರ ಸಹೋದರ ಇಬ್ಬರ ವಿಚಾರಣೆ ಕರೆದಿದೆ ಎಂದು ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಮಾಧ್ಯಮಗಳಿಗೆ ಮಾತನಾಡಿದ ಇಬ್ಬರನ್ನು ವಿಚಾರಣೆ ಮಾಡಿ ವಾಪಸ್ ಕಳುಹಿಸಿದ್ದಾರೆ. ಕ್ರಿಪ್ಟೋ ಕರೆನ್ಸಿ ಬಳಕೆ ವಿಚಾರ ವಾಗಿ ವಿಚಾರಣೆ ಮಾಡಿದ್ದಾರೆ. ಬಿಜೆಪಿಯ ಕಾರ್ಯಕರ್ತರು ದೇಶ ಭಕ್ತರು. ಇಂತಹ ಕೃತ್ಯ ಮಾಡಲು ಅಸಾಧ್ಯ ಎಂದರು.
ದಿನೇಶ್ ಗೂಂಡುರಾವ್ ಈ ವಿಚಾರವಾಗಿ ತುಂಬಾ ಕೆಟ್ಟದಾಗಿ ಟೀಕೆ ಮಾಡಿದ್ದಾರೆ. ಅವರು ಹಿಂದೆ ಮುಂದೆ ನೋಡದೆ ಹೇಳಿಕೆ ನೀಡಿದ್ದಾರೆ. ಒಬ್ಬ ಸಚಿವರಾಗಿ ಈ ರೀತಿ ಹೇಳಿಕೆ ನೀಡಿದ್ದು ಬೇಸರ ಮೂಡಿಸಿದೆ ಎಂದರು
ಇದನ್ನು ರಾಜಕೀಯವಾಗಿ ಕಾಂಗ್ರೆಸ್ ಬಳಕೆ ಮಾಡುತ್ತಿದೆ. ಬಿಜೆಪಿ ಬಗ್ಗೆ ಅಪಪ್ರಚಾರ ಮಾಡಿದ್ದಾರೆರಾಮೇಶ್ವರಂ ಕೆಫೆ ಪ್ರಕರಣದಲ್ಲಿ ತೀರ್ಥಹಳ್ಳಿಯವರು ಭಾಗಿಯಾಗಿದ್ದಾರೆ. ಅವರನ್ನು ಪೊಲೀಸರು ಶೀಘ್ರ ಬಂಧಿಸಿದ್ದಾರೆ ಎಂದರು.
ಇದನ್ನೂ ಓದಿ-https://suddilive.in/archives/12229