ಸಿನಿಮಾ ಸುದ್ದಿಗಳು

ಶಿವಮೊಗ್ಗ ಸಿರಿ ವೈಭವ ಆಲ್ಬಮ್ ಬಿಡುಗಡೆ

ಸುದ್ದಿಲೈವ್/ಶಿವಮೊಗ್ಗ

ನಾಗರಾಜ್ ನೀಲ್ ನಿರ್ದೇಶನದಲ್ಲಿ ಮಲೆನಾಡ ನಾಡಗೀತೆ ಎನಿಸಿಕೊಂಡಿರುವ ಶಿವಮೊಗ್ಗ ಸಿರಿ ವೈಭವ ಶೀರ್ಷಿಕೆ ಹಾಡು ಲೋಕಾರ್ಪಣೆ ಆಗುತ್ತಿದೆ.

ಈ‌ಕುರಿತು ಸುದ್ದಿಗೋಷ್ಠಿ ನಡೆಸಿದ ಆಲ್ಬಮ್ ನ ನಿರ್ದೇಶಕ ನಾಗರಾಜ್ ನೀಲ್, ನಗರದ ಕಂಟ್ರಿಕ್ಲಬ್ ನಲ್ಲಿ ಜ.15 ಸಂಕ್ರಾಂತಿ ಹಬ್ಬದಂದು ಡಿಸಿ ಡಾ.ಸೆಲ್ವಮಣಿ ಬಿಡುಗಡೆ ಮಾಡಲಿದ್ದಾರೆ. ಪಂಡಿತ್ ಪ್ರೊಡಕ್ಷನ್ ಅಡಿಯಲ್ಲಿ ವಿಠಲ್ ರಂಗಧೋಳ್ ಸಂಗೀತದಲ್ಲಿ, ಪ್ರದೀಪ್ ಆರ್ಯನ್, ನಿರಂಜನ್ ರೀಕ್ತಿ, ಸಙತೋಷ್ ಬಪ್ಪು ಛಾಯಾಗ್ರಹಣ ಮಾಡಿದ್ದಾರೆ.

ಕನ್ನಡದ ಪ್ರೇಮ ಕವಿ ಕೆ.ಕಲ್ಯಾಣ ಸಾಹಿತ್ಯ ಬರೆದಿದ್ದಾರೆ. ಗಾಯಕ ರಾಜೇಶ್ ಕೃಷ್ಣನ್ ಹಾಡಿದ್ದಾರೆ. ಐದು ನಿಮಿಷದ‌ಹಾಡು ಇದಾಗಿದೆ. ಪಂಡಿತ್ ಪ್ರೀತಮ್ ಮತ್ತು ನವ್ಯಶ್ರೀ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

ಕೊಡಚಾದ್ರಿ, ಕುಂದಾದ್ರಿ, ಜೋಗ, ಪಶ್ಚಿಮ ನದಿಗಳು ಲಯನ್ ಸಫಾರಿ, ಆಗುಂಬೆ, ಕುಪ್ಪಳ್ಳಿ, ಸೊರಬ, ಬೆಳ್ಳಿಗಾವಿ, ಉಡುತಡಿ ಸೇರಿದಂತೆ 15 ಸ್ಥಳಗಳಲ್ಲಿ ಶೂಟಿಂಗ್ ನಡೆದಿದೆ.

ಆಲ್ಬಮ್ ಪ್ರಯುಕ್ತ ಎರಡು ಪ್ರಮೋಷನ್ ಹಾಡು ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಲಾಗಿದೆ.

ಇದನ್ನೂ ಓದಿ-https://suddilive.in/archives/6520

Related Articles

Leave a Reply

Your email address will not be published. Required fields are marked *

Back to top button