ಕುತ್ತಿಗೆಯಲ್ಲಿದ್ದ ಚಿನ್ನಾಭರಣ ಕಳುವು
ಸುದ್ದಿಲೈವ್/ಶಿವಮೊಗ್ಗ
ದೇವಸ್ಥಾನಕ್ಕೆ ಹೋಗಲು ಆಟೋ ಹತ್ತಿ ಮನೆಯಿಂದ ದೇವಸ್ಥಾನದ ವರೆಗೆ ಬಂದ ಮಹಿಳೆಗೆ ಶಾಕ್ ಆಗಿದೆ. ಕುತ್ತಿಗೆಯಲ್ಲಿ ಪೆಂಡೆಂಟ್ ಮಾತ್ರ ಇದ್ದು, 38 ಗ್ರಾಂ ಚಿನ್ನಾಭರಣವನ್ನ ಕಳೆದುಕೊಂಡಿರುವ ಘಟನೆ ವರದಿಯಾಗಿದೆ.
ದುರ್ಗಿಗುಡಿಯಲ್ಲಿ ದುರ್ಗಮ್ಮ ದೇವಿಯ ಜಾತ್ರಾ ಮಹೋತ್ಸವಕ್ಕೆ ಬಾಪೂಜಿ ನಗರದಿಂದ 65 ವರ್ಷದ ಮಹಿಳೆಯು ತಂಗಿ ಹಾಗು ಅಕ್ಕನ ಮಗಳೊಂದಿಗೆ ಮೂರು ಜನರು ಮಾ.25 ರಂದು ರಾತ್ರಿ 07-15 ಗಂಟೆಗೆ ಒಂದು ಆಟೋದಲ್ಲಿ ಹತ್ತಿ ಸಂಜೆ 07-30 ಗಂಟೆಗೆ ದುರ್ಗಿಗುಡಿಯ ರಾಮಮಂದಿರ ಹತ್ತಿರ ಬಂದು ಇಳಿದಿದ್ದಾರೆ.
ದುರ್ಗಮ್ಮ ದೇವಸ್ಥಾನಕ್ಕೆ ಹೋಗಲು ದುರ್ಗಿಗುಡಿ ರಸ್ತೆಯ ಮೂಲಕ ನಡೆದುಕೊಂಡು ದುರ್ಗಮ್ಮ ದೇವಸ್ಥಾನದ ಹತ್ತಿರ ಬಂದಿದ್ದಾರೆ. ದುರ್ಗಮ್ಮ ದೇವಸ್ಥಾನದ ಒಳಗೆ ಹೋಗಲು ದೇವಸ್ಥಾನದ ಎದುರು ನಿಂತಿರುವಾಗ ಸಂಜೆ:-07-45 ಗಂಟೆಗೆ ಮಹಿಳೆಗೆ ತಂಗಿ ಭುಜದ ಮೇಲೆ ಲಕ್ಷ್ಮೀ ಪೆಂಡೆಂಟ್ ಇದ್ದುದನ್ನು ನೋಡಿ ಭುಜದ ಮೇಲೆ ಪೆಂಡೆಂಟ್ ಮಾತ್ರ ಇದೆ ಕೊರಳಿನಲ್ಲಿ ಬಂಗಾರದ ಸರ ಇಲ್ಲವೆಂದು ಹೇಳಿದ್ದಾರೆ.
ತಂಗಿ ಹೇಳುತ್ತಿದ್ದಂತೆ ಯಶೋಧರವರು ತನ್ನ ಕೊರಳಿನಲ್ಲಿ ಹಾಕಿಕೊಂಡಿದ್ದ ಎರಡು ಎಳೆಯ ಸುಮಾರು 1,50,000/- ರೂ ಬೆಲೆ ಬಾಳು 38 ಗ್ರಾಂ ತೂಕ ಬಂಗಾರದ ಸರವನ್ನು ನೋಡಿಕೊಂಡಾಗ ಭುಜದ ಮೇಲೆ ಬಂಗಾರದ ಸರದಲ್ಲಿದ್ದ ಲಕ್ಷ್ಮೀ ಪೆಂಡೆಂಟ್ ಮಾತ್ರ ಇದ್ದು ಬಂಗಾರದ ಸರ ಇಲ್ಲದೆ ಇರುವುದು ಗಮನಕ್ಕೆ ಬಂದಿದೆ.
ಮೂವರೂ ತಪಾಸಣೆ ಮಾಡಿದ್ದಾರೆ. ಎಲ್ಲಡೆ ಹುಡುಕಿದರೂ ಚಿನ್ನಾಭರಣ ಸಿಗದೆ ಇರುವುದರಿಂದ ಯಶೋಧ ಎಂಬುವರು ದೊಡ್ಡಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ-https://suddilive.in/archives/11597