ಸಂಸದ ರಾಘವೇಂದ್ರ ಸರ್ವಾನುಮತದಿಂದ ಆಯ್ಕೆಯಾಗಬೇಕು-ಬಿ.ಎಸ್ ವೈ
ಸುದ್ದಿಲೈವ್/ಶಿವಮೊಗ್ಗ
ನಾಳೆ ಶಿಕಾರಿಪುರದಲ್ಲಿ ಹುಚ್ಚರಾಯ ಆಂಜನೇಯ ಸ್ವಾಮಿ ದೇವರ ರಥೋತ್ಸವ ನಡೆಯಲಿದ್ದು ಆ ರಥೋತ್ಸವದಲ್ಲಿ ಭಾಗಿಯಾಗುತ್ತಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಇಂದು ಶಿವಮೊಗ್ಗದಲ್ಲಿರುವ ವಿನೋಬ ನಗರದ ಮನೆಗೆ ಭೇಟಿ ನೀಡಿದ್ದರು.
ಮನೆಗೆ ಭೇಟಿ ನೀಡಿದ ಬೆನ್ನಲ್ಲಿ ಸಾಲು ಸಾಲು ಕೆಲ ಪ್ರಮುಖ ಸಮಾಜಗಳ ಸಭೆ ನಡೆಸಿದ್ದಾರೆ. ಗಂಗಮತಸ್ಥರ ಸಭೆ, ಸಾಧು ಶೆಟ್ಟಿ ಸಮಾಜದ ಸಭೆ, ಬ್ರಾಹ್ಮಣ ಹಾಗೂ ವೀರಶೈವ ಲಿಂಗಾಯತ ಸಮಾಜದ ಸಭೆ ನಡೆಸಲಿದ್ದಾರೆ.
ಮೊದಲಿಗೆ ನಡೆದ ಗಂಗಮತ ಸಮಾಜದ ಸಭೆ ನಡೆಸಿದ ಯಡಿಯೂರಪ್ಪ, ಲೋಕಸಭಾ ಸದಸ್ಯರಾಗಿರುವ ರಾಘವೇಂದ್ರ ಶಿವಮೊಗ್ಗದ ಜನ ಏನೇನು ಅಪೇಕ್ಷೆ ಪಟ್ಟಿದ್ದಾರೋ ಆ ಕೆಲಸಗಳನ್ನ ಮಾಡಿ ಮುಗಿಸಿದ್ದಾರೆ. ಏನಾದರೋ ಬಾಕಿ ಉಳಿದಿರುವ ಕೆಲಸಗಳಿದ್ದರೆ ಅದನ್ನೂ ಹೇಳಿ ಮಾಡೋಣ ಎಂದರು.
ಕೆಲವೇ ದಿನಗಳಲ್ಲಿ ಬಿಜೆಪಿ ಹಿಂದಿನಿಗಿಂತ ಹೆಚ್ಚಿನ ಸ್ಥಾನಗಳನ್ನ ಗೆಲ್ಲಲಿದೆ. ಎಲ್ಲಿ ಬಿಜೆಪಿಗೆ ಒಲವಿಲ್ಲ ಅಲ್ಲಿ ಹೋಗಿ ಕೆಲಸ ಮಾಡಿ ಗೆಲ್ಲಿಸಬೇಕು. ಶಿವಮೊಗ್ಗ ನಗರ ಮತ್ತು ಜಿಲ್ಲೆಯಲ್ಲಿ ಶೇ.90ಭಾಗ ಕೆಲಸಾಗಿದೆ. ಉಳಿದ ಕೆಲಸ ಬಾಕಿದ್ದರೆ ಸಮಾಜ ತಿಳಿಸಿದರೆ ಮಾಡಿ ಮುಗಿಸೋಣ ಎಂದರು.
ರಾಘವೇಂದ್ರ ಮಾಡಿರುವ ಕೆಲಸ ನೋಡಿದರೆ ಸರ್ವಾನು ಮತಗಳಿಂದ ಗೆಲ್ಲಬೇಕಿದೆ. ನಿಮ್ಮಗಳ ಸಹಕಾರ ಹೀಗೆ ಮುಂದುವರೆಸುವಂತೆ ಕೋರಿದರು. ನಂತರ ಮೂರು ಸಮಾಜದ ಸಭೆ ನಡೆಸಿ ಶಿಕಾರಿಪುರಕ್ಕೆ ಮಾಜಿ ಸಿಎಂ ಪ್ರಯಾಣ ಬೆಳಸಲಿದ್ದಾರೆ.
ಇದನ್ನೂ ಓದಿ-https://suddilive.in/archives/13422