ಸ್ಥಳೀಯ ಸುದ್ದಿಗಳು

ಮೋದಿನೇ ಗ್ಯಾರೆಂಟಿ-ಸಂಸದ ರಾಘವೇಂದ್ರ

ಸುದ್ದಿಲೈವ್/ಶಿವಮೊಗ್ಗ

ನಿನ್ನೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕೊಡುಗೆಯಾಗಿ ಉಜ್ವಲ ಯೋಜನೆ ಸಿಲಿಂಡರ್ ಬೆಲೆ 100 ರೂ ಕಡಿಮೆ ಆಗಿದೆ ಇದನ್ನು ಸ್ವಾಗತಿಸುತ್ತೇನೆ ಎಂದು ಸಙಸದ ರಾಘವೇಂದ್ರ ಮಾಧ್ಯಮಗಳಿಗೆ ತಿಳಿಸಿದರು.

ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸುಧಾಮೂರ್ತಿ ಅವರನ್ನು ರಾಜ್ಯಸಭೆಗೆ ನಾಮಕರಣ ಮಾಡಿದ್ದಾರೆ. ಸುಧಾಮೂರ್ತಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಶಿವಮೊಗ್ಗ ಕ್ಷೇತ್ರದಿಂದ ಗೀತಾ ಶಿವರಾಜ್ ಕುಮಾರ್ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನಮ್ಮ ಶಕ್ತಿ ಅಂದ್ರೆ ನಮ್ಮ ಕಾರ್ಯಕರ್ತರು. ನಮ್ಮ ಶಕ್ತಿ ನರೇಂದ್ರಮೋದಿ ರಾಷ್ಟ್ರೀಯ ವಿಚಾರ ಇಟ್ಟುಕೊಂಡು ಚುನಾವಣೆ ಮಾಡೋದು. ಯುವಕರಿಗೆ ರೈತರಿಗೆ ಮಹಿಳೆಯರಿಗೆ ಅಭಿವೃದ್ಧಿ ವಿಚಾರ ಮತದಾರರಿಗೆ ತಿಳಿಸುತ್ತೇವೆ ಎಂದರು.‌

ಈ ಬಾರಿ ಮತ್ತೊಮ್ಮೆ ಹೆಚ್ಚಿನ ಅಂತರದಿಂದ ಬಿಜೆಪಿಗೆ ಮತ ಸೆಳೆಯುವ ಕೆಲಸ ಮಾಡ್ತೇವೆ. ಬಿಜೆಪಿ ಅಭ್ಯರ್ಥಿ ಘೋಷಣೆ ನಾಳೆ ನಾಡಿದ್ದು ಮತ್ತೆ ಸಭೆ ನಡೆಯಲಿದೆ. 2 -3 ದಿನದಲ್ಲಿ ಬಹುತೇಕ ಪಟ್ಟಿ ಅಂತಿಮವಾಗಲಿದೆ.

ಹಾಲಿ ಸಂಸದರಿಗೆ ಟಿಕೇಟ್ ಕೈತಪ್ಪುವ ಸಾಧ್ಯತೆಯ ಬಗ್ಗೆ ಚರ್ಚೆಯಾಗುತ್ತಿದೆ ಎಂಬ ಕುರಿತು ಮಾತನಾಡಿದ ಸಂಸದರು, ಇದು ತುಂಬಾ ಬೇಗ ಆಯ್ತು ಊಹ ಪೋಹಗಳು ಇದೆ. ಈ ಬಾರಿ ಎನ್ ಡಿಎ ಹೆಚ್ಚು ಸ್ಥಾನ ಪಡೆಯಲಿದೆ ಎಂದರು.‌

ಶಿವಮೊಗ್ಗದಲ್ಲಿ ನಡೆದ ಎಲ್ಲಾ ಚುನಾವಣೆಗಳು ನೇರ ಸ್ಪರ್ಧೆಯಾಗಲಿದೆ. ಬಂಗಾರಪ್ಪನವರು‌ ನಿಂತುಕೊಂಡಾಗ ನೇರ ಸ್ಪರ್ಧೆ ಏರ್ಪಟ್ಟಿತ್ತು. ಯಡಿಯೂರಪ್ಪ ಸ್ಪರ್ಧೆ ಮಾಡಿದಾಗ ತ್ರಿಕೋನ ಸ್ಪರ್ಧೆಯಾಗಲಿದೆ. ಎಲ್ಲಾ ಸವಾಲು ಎದುರಿಸುವ ಕೆಲಸ ಬಿಜೆಪಿ ಮಾಡಿದೆ. ಈ ಬಾರಿಯೂ ಆ ಸವಾಲು ಇದ್ದೇ ಇರುತ್ತದೆ ಎಂದರು.

ಒಳ್ಳೆಯ ವಾತಾವರಣ ಇದ್ದೆ ಇರುತ್ತದೆ. ಆ ವಾತಾವರಣವನ್ನು ಮತವಾಗಿ ಪರಿವರ್ತನೆ ಮಾಡ್ತೇವೆ. ಮೋದಿ ಅಭಿವೃದ್ಧಿ ಕೆಲಸ ಇಟ್ಟುಕೊಂಡು ಮತ ಕೇಳುತ್ತೇವೆ. ರಾಜ್ಯ ಸರಕಾರದ ಗ್ಯಾರಂಟಿ ಜನರಿಗೆ ಗ್ಯಾರಂಟಿ ತಾತ್ಕಾಲಿಕ, ಮೋದಿ ಬಗ್ಗೆ ಗೌರವ ಹೆಚ್ಚಾಗ್ತಿದೆಈ ಬಾರಿ ಎನ್ ಡಿಎ 400 ಸ್ಥಾನಕ್ಕಿಂತ ಹೆಚ್ಚು ಸ್ಥಾನ ಬಿಜೆಪಿ ಪಡೆಯಲಿದೆ ಎಂದರು.

ಕುಮಾರ್ ಬಂಗಾರಪ್ಪ ವಿಚಾರ, ಚುನಾವಣೆ ಬಂದಿದೆ ತೊಡಗಿಸಿಕೊಳ್ಳುವ ವಿಶ್ವಾಸ ಇದೆ. ಅವರ ವೈಯಕ್ತಿಕ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಚುನಾವಣಾ ಸಂದರ್ಭದಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ-https://suddilive.in/archives/10359

Related Articles

Leave a Reply

Your email address will not be published. Required fields are marked *

Back to top button