ರಾಜಕೀಯ ಸುದ್ದಿಗಳು
ನಾಮಪತ್ರ ಕೊನೆಯ ದಿನಾಂಕದಂದು ಸಲ್ಲಿಕೆಯಾಗಿದ್ದು ಎಷ್ಟು?
ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗ ಲೋಕಸಭ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳ ಪಟ್ಟಿ 30 ಕ್ಕೆ ಏರಿಕೆಯಾಗಿದೆ.
ಎಸ್.ಬಾಲಕೃಷ್ಣ ಭಟ್, ಕೆಎಸ್ ಈಶ್ವರಪ್ಪ, ಪೂಜಾ ಎನ್ ಅಣ್ಣಯ್ಯ, ರವಿಕುಮಾರ್ ಎನ್, ಇಮ್ತಿಯಾಜ್ ಎ ಅತ್ತಾರ್, ಡಿ.ಎಸ್ ಈಶ್ವರಪ್ಪ, ಪಿ.ಶ್ರೀಪತಿ, ಸತೀಶ್ ಪೂಜಾರಿ, ಸಂದೇಶ್ ಶೆಟ್ಟಿ ಎ ಇಂದು ನಾಮಪತ್ರ ಸಲ್ಲಿಸಿದ್ದಾರೆ.
ಇದರಲ್ಲಿ ಇಬ್ಬರು ಬೆಂಗಳೂರು ಮತ್ತು ಓರ್ವರು ಉಡುಪಿಯವರಿದ್ದಾರೆ. ಈಶ್ವರಪ್ಪನವರು ನಾಲ್ಕು ನಾಮಪತ್ರ ಸಲ್ಲಿಸಿದ್ದಾರೆ. ಡಿಎಸ್ ಈಶ್ವರಪ್ಪನವರು ಸಹ ಎರಡು ನಾಮಪತ್ರ ಸಲ್ಲಿಸಿದ್ದಾರೆ. ಡಿಎಸ್ ಈಶ್ವರಪ್ಪನವರಿಗೆ ರೈತ ಹೋರಾಟ ಬೆನ್ನೆಲುಬು ಇದೆ. ಇಂದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ನಾಮಪತ್ರ ಪರಿಶೀಲನೆ ನಾಳೆ ನಡೆಯಲಿದೆ.
ಇದನ್ನೂ ಓದಿ-https://suddilive.in/archives/13164