ರಾಜಕೀಯ ಸುದ್ದಿಗಳು

ಹರಿಪ್ರಸಾದ್ ರನ್ನ ತಕ್ಷಣ ಬಂಧಿಸಿ-ಈಶ್ವರಪ್ಪ

ಸುದ್ದಿಲೈವ್/ಶಿವಮೊಗ್ಗ

ಕಾಂಗ್ರೆಸ್ ಪಕ್ಷಕ್ಕೆ ಕೇಡುಗಾಲ ಬಂದಿದೆ. ಕಾಂಗ್ರೆಸ್ ನಾಯಕರುಗಳು ಧರ್ಮದ ವಿರುದ್ದವಾಗಿ ಬೇಕು ಅಂತಾ ಮಾತನಾಡ್ತಿದ್ದಾರೋ… ಪ್ರಚಾರಕ್ಕೋಸ್ಕರ ಮಾತನಾಡ್ತಿದ್ದಾರೋ‌ ಗೊತ್ತಿಲ್ಲ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಅನುಮಾನ ವ್ಯಕ್ತಪಡಿಸಿದರು.

ಮಾಧ್ಯಮಗಳಿಗೆ ಮಾತನಾಡಿ  ದೇಶದಲ್ಲಿ 17 ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ರಾಜ್ಯದಲ್ಲಿ ಯಾಕೆ ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ ಅಂತಾ ಕಾಂಗ್ರೆಸ್ ನಾಯಕರು ಧರ್ಮದ ವಿರೋಧಿಗಳಾಗಿದ್ದಾರೆ. ಭಯೋತ್ಪಾದಕರು ಆಗುವ ಪ್ರಯತ್ನ ಮಾಡ್ತಿದ್ದಾರೆ ಎಂದು ದೂರಿದರು.

ಹರಿಪ್ರಸಾದ್ ಹೇಳಿಕೆ ಅರ್ಥಹೀನ. ಭಯೋತ್ಪಾದಕರ ಬಗ್ಗೆ ಹರಿಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇವರೇ‌ ಭಯೋತ್ಪಾದಕ ಪಟ್ಟಿಯಲ್ಲಿ ಇದ್ದಾರಾ? ಆ ಗಲಾಟೆ ನಡೆಯಲು ಹರಿಪ್ರಸಾದ್ ನೇತೃತ್ವದಲ್ಲಿ ಪೂರ್ಣ ತಯಾರಿ ನಡೆದಿದೆಯಾ?ಹರಿಪ್ರಸಾದ್ ಅವರನ್ನು ಏಕೆ ಇನ್ನು ಬಂಧಿಸಿಲ್ಲ. ಹರಿಪ್ರಸಾದ್ ಅವರನ್ನು ತಕ್ಷಣ ಬಂಧಿಸುವಂತೆ ಗೃಹ ಸಚಿವರಿಗೆ ಆಗ್ರಹಪಡಿಸುತ್ತೇನೆ ಎಂದರು.

ಹರಿಪ್ರಸಾದ್ ರಾಷ್ಟ್ರದ್ರೋಹದ ಹೇಳಿಕೆ ಕೊಟ್ಟಿದ್ದಾರೆ ತಕ್ಷಣ ಬಂಧಿಸಬೇಕು. ಅವರಿಗೆ ಯಾವ ಭಯೋತ್ಪಾದಕ ಸಂಸ್ಥೆ ಜೊತೆ ಸಂಬಂಧ ಇದೆ ತನಿಖೆ ಮುಖಾಂತರ ಹೊರಗೆ ತರಬೇಕು. ನಾಳೆ ಏನಾದರೂ ಹೆಚ್ಚು ಕಡಿಮೆ ಆದರೆ ಕಾಂಗ್ರೆಸ್ ಸರಕಾರ ಕಾರಣ. ಹರಿಪ್ರಸಾದ್ ಹೇಳಿದರೂ ಕೂಡಾ ಅವರ ವಿರುದ್ದ ಕ್ರಮ ಕೈಗೊಳ್ಳಲಿಲ್ಲ ಅಂದ್ರೆ ಸರಕಾರದ ಕುಮ್ಮಕ್ಕು ಸಹ ಇದೆ ಎನ್ನುವ ಭಾವನೆ ಬರುತ್ತದೆ ಎಂದರು.

ಹರಿಪ್ರಸಾದ್ ಹೇಳಿಕೆ ದೇಶದ ಜನತೆಗೆ ದಿಗ್ಬ್ರೆಮೆ ಉಂಟು ಮಾಡುವ ಹೇಳಿಕೆ ಯಾಗಿದೆ.ಸಿಎಂ, ಹಾಗು ಗೃಹ ಸಚಿವರು ಹರಿಪ್ರಸಾದ್ ಬಂಧಿಸಲು ಕ್ರಮ ವಹಿಸಬೇಕು  ಎಂದರು.

ಇದನ್ನೂ ಓದಿ-https://suddilive.in/archives/6148

Related Articles

Leave a Reply

Your email address will not be published. Required fields are marked *

Back to top button