ರಾಷ್ಟ್ರೀಯ ಸುದ್ದಿಗಳು
ಹೋಳಿಗೆ ಗೌರಮ್ಮ ಇನ್ನಿಲ್ಲ
ಸುದ್ದಿಲೈವ್/ಶಿವಮೊಗ್ಗ
ಮಲೆನಾಡಿನ ನಮ್ಮ ಹೆಮ್ಮೆಯ ಗೌರಮ್ಮ ಅವರು ತಮ್ಮ ಶುಚಿಯಾದ ಹಾಗೂ ತಮ್ಮದೇ ವಿಶೇಷ ಶೈಲಿಯ ರುಚಿಯ ಮೂಲಕ ಹೋಳಿಗೆ ತಯಾರಿಸಿ ಜಿಲ್ಲೆ ಸೇರಿದಂತೆ ದೇಶ ವಿದೇಶಗಳಲ್ಲಿ ಉತ್ತಮ ಹೆಸರು ಗಳಿಸಿ ಹೋಳಿಗೆ ಗೌರಮ್ಮ ಎಂದೇ ಖ್ಯಾತರಾದ ಇವರು ನಿನ್ನೆ ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ.
ಮೂಲತಃ ಶಿವಮೊಗ್ಗದ ತೀರ್ಥಹಳ್ಳಿಯವರಾದ ಇವರು ಕಡುಬಡತನದಲ್ಲಿ ಜೀವನ ಸಾಗಿಸುತ್ತಾ ಬದುಕು ಕಟ್ಟಿಕೊಂಡವರು. ಇದರೊಂದಿಗೆ ಹತ್ತಾರು ಜನರಿಗೆ ಉದ್ಯೋಗ ನೀಡಿ ಬದುಕು ಸಾಗಿಸಲು ಬೆನ್ನೆಲುಬಾಗಿ ನಿಂತವರು.
ಕಳೆದ 50 ವರ್ಷಗಳಿಂದ ವಿವಿಧ ಬಗೆಯ ಹೋಳಿಗೆಗಳನ್ನು ತಯಾರಿಸಿಕೊಂಡು ಹೋಳಿಗೆ ಪ್ರಿಯರ ಅಚ್ಚುಮೆಚ್ಚಿನ ಹೋಳಿಗೆ ಗೌರಮ್ಮ ಆಗಿ ಶಿವಮೊಗ್ಗದ ಹೆಸರನ್ನು ದೇಶವಿದೇಶಗಳಲ್ಲಿ ಪರಿಚಯಿಸಿದವರು
ಅವರ ಅಗಲಿಕೆಯ ಈ ಸಂದರ್ಭದಲ್ಲಿ ದುಃಖವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗದವರಿಗೆ ದೇವರು ನೀಡಲಿ ಎಂದು ಸಂಸದ ರಾಘವೇಂದ್ರ ಪ್ರಾರ್ಥಿಸಿದ್ದಾರೆ.
ಇದನ್ನೂ ಓದಿ-https://suddilive.in/archives/12822