ಕ್ರೈಂ ನ್ಯೂಸ್

ಅನೈತಿಕ ಸಂಬಂಧದ ಹಿನ್ನಲೆ ಪತಿಯಿಂದಲೇ ಪತ್ನಿಯ ಹತ್ಯೆ

ಸುದ್ದಿಲೈವ್/ಭದ್ರಾವತಿ

ಅನೈತಿಕ ಸಂಬಂಧಕ್ಕೆ ಪತ್ನಿ ಅಡ್ಡಿ,ಯಾಗಿದ್ದಕ್ಕೆ ಪತ್ನಿಯ ಕತ್ತು ಸೀಳಿ ಕೊಲೆಗೈದ ಘಟನೆ ವರದಿಯಾಗಿದೆ. ಪತಿಯಿಂದಲೇ ಪತ್ನಿ ಹತ್ಯೆಯಾಗಿದ್ದಾಳೆ. ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಬೊಮ್ಮನಕಟ್ಟೆ ಬಡಾವಣೆಯಲ್ಲಿ ಘಟನೆ ನಡೆದಿದೆ.

ತಡವಾಗಿ ಘಟನೆ ಬೆಳಕಿಗೆ ಬಂದಿದ್ದು, ರಮ್ಯ (38) ಕೊಲೆಯಾದ ದುರ್ದೈವಿಯಾಗಿದ್ದಾಳೆ. ನಾಗಭೂಷಣ ಎಂವಯವನಿಂದಲೇ ಪತ್ನಿ ರಮ್ಯಳ ಕೊಲೆ ನಡೆದಿದೆ. ಇಬ್ಬರದ್ದು ಎರಡನೇ ಮದುವೆ ಎನ್ನಲಾಗಿದೆ.

ಕೊಲೆಯಾದ ರಮ್ಯಾ ಈ ಮೊದಲು ವಿವಾಹವಾಗಿ ವಿಚ್ಛೇದನ ನೀಡಿದ್ದಳು. ನಾಗಭೂಷಣ ಸಹ ಮೊದಲ ಪತ್ನಿಗೆ ವಿಚ್ಛೇದನ ನೀಡಿ ರಮ್ಯ ಜೊತೆ ಎರಡನೇ ‌ಮದುವೆಯಾಗಿದ್ದನು. ಕಳೆದ ಮೂರು ವರ್ಷದ ಹಿಂದೆ ದೇವಸ್ಥಾನದಲ್ಲಿ ಇಬ್ವರು ಮದುವೆಯಾಗಿದ್ದರು.

ಚಿಕ್ಕಬಳ್ಳಾಪುರ ಮೂಲದ ರಮ್ಯಾಗೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ನಾಗಭೂಷಣ್, ಬೆಂಗಳೂರಿನಲ್ಲಿ ಆಟೋ ಓಡಿಸಿಕೊಂಡಿದ್ದನು. ಬೆಂಗಳೂರಿನಲ್ಲಿ ಮತ್ತೊಬ್ಬ ಮಹಿಳೆ ಜೊತೆ ಅನೈತಿಕ ಸಂಬಂಧ ಹೊದಿದ್ದ ಎಂದು ರಮ್ಯ ಅನುಮಾನ ಪಟ್ಟಿದ್ದಳು.

ಪತಿಯ ಅನೈತಿಕ ಸಂಬಂಧ ವಿಷಯ ಪತ್ನಿಗೆ ತಿಳಿದು ಇಬ್ಬರ ನಡುವೆ ಜಗಳ ಉಂಟಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಬುಧವಾರ ರಾತ್ರಿ ಆರೋಪಿ ಕೊಲೆಗೈದಿದ್ದಾನೆ. ಪತ್ನಿ ಕೊಲೆಗೈದು ಪತಿ ನಾಗಭೂಷಣ್ ಪೊಲೀಸ್ ಠಾಣೆಗೆ ಹೋಗಿ ಸರೆಂಡರ್ ಆಗಿದ್ದಾನೆ. ಘಟನೆ ಕುರಿತು ಪೇಪರ್ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ-https://suddilive.in/archives/5204

Related Articles

Leave a Reply

Your email address will not be published. Required fields are marked *

Back to top button