ಕ್ರೈಂ ನ್ಯೂಸ್

ಮಣ್ಣು ಕುಸಿದು ಕಾರ್ಮಿಕನ ಸ್ಥಿತಿ ಗಂಭೀರ

ಸುದ್ದಿಲೈವ್/ಶಿವಮೊಗ್ಗ

ಸವಳಂಗ ರಸ್ತೆಯ ರೈಲ್ವೆ ಸೇತುವೆ ಕಾಮಗಾರಿಯ ವೇಳೆ ಮಣ್ಣು ಕುಸಿದು ಕಾರ್ಮಿಕನೋರ್ವ ಗಂಭೀರ ಸ್ಥಿತಿಗೆ ತಲುಪಿದ್ದು ಸ್ಥಳೀಯರು ರಕ್ಷಿಸಿ ಮೆಗ್ಗಾನ್ ಗೆ ರವಾನಿಸಿದ್ದಾರೆ.

ಸವಳಂಗ ರಸ್ತೆಯ ರೈಲ್ವೆ ಮೇಲು ಸೇತುವೆಯ ಕಾಮಗಾರಿಯ ವೇಳೆ ಅಂಡರ್ ಗ್ರೌಂಡ್ ಪೈಪ್ ಲೈನ್ ಕೂರಿಸಲು ಕಾರ್ಮಿಕ ಸತೀಶ್ ನಾಯ್ಕ್(30)  ಜೆಸಿಬಿಯಿಂದ ಮಣ್ಣು ತಗೆಯಿಸಿ ಒಳಗೆ ಇಳಿದು ಕೆಲಸ ಮಾಡುತ್ತಿದ್ದ.‌ ಈ ವೇಳೆ ಅಗೆದ ಮಣ್ಣು ಕುಸಿದಿದೆ.

ಮಣ್ಣಿನ ಕೆಳಗೆ ಕುಸಿದ ಸತೀಶ್ ನಾಯ್ಕ್ ನನ್ನ ಸ್ಥಳೀಯರು ರಕ್ಷಿಸಿ ಹೈವೆ ಇಲಾಖೆ ವಾಹನದಲ್ಲಿ ಆಸ್ಪತ್ರೆಗೆ ರವಾನಿಸಲಾಗಿದೆ. ಮಣ್ಣು ಕುಸಿದ ಕಾರಣ ಸತೀಶ್ ನನ್ನ ರಕ್ಷಿಸಲು ಜೆಸಿಬಿ ಬಳಸಿದ್ದ ಕಾರಣ ತಲೆಗೆ ತೀವ್ರತರವಾದ ಗಾಯಗಳಾಗಿವೆ.

ತಲೆಗೆ ಗಾಯಗೊಂಡ ಸತೀಶ್ ನಾಯ್ಕ್ ಸ್ಥಿತಿ ತಲುಪಿದ್ದಾನೆ. ಆತನ ಬಲಭಾಗದ ಮೆದಳು ಹೊರಗೆ ಬಿದ್ದಿದೆ. ಗ್ರಾಮಾಂತರ‌ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸವಳಂಗ ರಸ್ತೆಯ  ಮೂಲರಂಗಪ್ಪ ಪೆಟ್ರೋಲ್ ಬಂಕ್ ಎದುರು ಘಟನೆ ನಡೆದಿದೆ.‌

ಇದನ್ನೂ ಓದಿ-https://suddilive.in/archives/3586

Related Articles

Leave a Reply

Your email address will not be published. Required fields are marked *

Back to top button