ಸ್ಥಳೀಯ ಸುದ್ದಿಗಳು

ಅಂತೂ ಇಂತೂ ಪಿಐ ಅಂಜನ್ ಕುಮಾರ್ ಗೆ ಲಭಿಸಿದ ಬಿಡುಗಡೆಯ ಭಾಗ್ಯ

ಸುದ್ದಿಲೈವ್/ಶಿವಮೊಗ್ಗ

ದೊಡ್ಡಪೇಟೆ ಪೊಲೀಸ್ ಇನ್ ಸ್ಪೆಕ್ಟರ್ ಅಂಜನ್ ಕುಮಾರ್ ಅವರಿಗೆ ಕೊನೆಗೂ ವರ್ಗಾವಣೆಯ ಬಿಡುಗಡೆ ಭಾಗ್ಯ ಒದಗಿಬಂದಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯಿಂದ ಬೆಂಗಳೂರಿಗೆ ತೆರಳಬೇಕಿದ್ದ ಇನ್ ಸ್ಪೆಕ್ಟರ್ ಅಂಜನ್ ಕುಮಾರ್ ನಿರೀಕ್ಷೆಯಲ್ಲಿದರೂ ಬಿಡುಗಡೆಯಾಗಿರಲಿಲ್ಲ.

ಆದರೆ ಈಗ ಅವರ ಸ್ಥಾನಕ್ಕೆ ಬೆಂಗಳೂರಿನ ಸಿಐಡಿಯಲ್ಲಿದ್ದ ರವಿ ಸಂಗನಗೌಡ ಪಾಟೀಲ್ ಇಂದಿನಿಂದ ಚಾರ್ಜ್ ವಹಿಸಿಕೊಂಡಿದ್ದಾರೆ. ಇದರಿಂದ ಅಂಜನ್ ಕುಮಾರ್ ರಿಲೀವ್ ಆಗಿದ್ದಾರೆ. ಕಳೆದ ಮೂರು ತಿಂಗಳಿಂದ ಇಲ್ಲದ ಜಯನಗರಕ್ಕೂ ಸಿದ್ದನಗೌಡರು ಪಿಐ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಆದರೆ ಕೋಟೆ ಪೊಲೀಸ್ ಠಾಣೆಗೆ ಪಿಐ ವರ್ಗಾವಣೆಯಾಗಿದ್ದರೂ ಇನ್ನೂ ಅಧಿಕಾರ ವಹಿಸಿಕೊಂಡಿಲ್ಲ. ಸಾಗರದ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿರುವ ರೋಹನ್ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಕೋಟೆಗೆ ವರ್ಗಾವಣೆಯಾಗಿರುವ ಚಂದ್ರಶೇಖರ್ ಎನ್ ಹರಿಹರ ಅವರೂ ಸಹ ಅಧಿಕಾರ ವಹಿಸಿಕೊಂಡಿಲ್ಲ.

ಅಂಜನ್ ಕುಮಾರ್ ವರ್ಗಾವಣೆಯಿಂದ ಹಲವು ಬದಲಾವಣೆಗಳು ಕಂಡು ಬರುತ್ತಿದೆ. ಕೆಲ ಪೊಲೀಸರು ರಿಲೀವರ್ ರವಿ ಸಂಗನಗೌಡ ಅಧಿಕಾರ ವಹಿಸಿಕೊಂಡಿದ್ದಕ್ಕೆ ವಾಟ್ಸಪ್ ಸ್ಟೇಟಸ್ ಗಳು ಹರಿದಾಡುತ್ತಿವೆ. ಅಂಜನ್ ಕುಮಾರ್ ಗೆ ಹೃದಯಸ್ಪರ್ಶಿ ಬೀಳ್ಕೊಡುಗೆ ಸಮಾರಂಭ ಮತ್ತು ರವಿಸಂಗನ ಗೌಡ ಪಾಟೀಲರಿಗೆ ಹೃತ್ಪೂರ್ವಕ ಸ್ವಾಗತದ ಕಾರ್ಯಕ್ರಮ ದೊಡ್ಡಪೇಟೆ ಠಾಣೆಯಲ್ಲಿ ನೇಯುವ ನಿರೀಕ್ಷೆ ಇದೆ.

ಇದನ್ನೂ ಓದಿ-https://suddilive.in/archives/3467

Related Articles

Leave a Reply

Your email address will not be published. Required fields are marked *

Back to top button