ನಗರ‌ ಸುದ್ದಿಗಳು

ಮುಂದುವರೆದ ಮತದಾನ ಜಾಗೃತಿ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಮತದಾನ ಜಾಗೃತಿ ಮುಂದುವರೆದಿದೆ. ಇಂದು ಶಿವಮೊಗ್ಗ ನಗರದಲ್ಲಿ ವಿವಿಧೆಡೆ ನಡೆದ ಜಾತ್ರೆ, ರಥೋತ್ಸವ ಹಾಗೂ ಸಂತೆಯಲ್ಲಿ ಮತದಾನ ಜಾಗೃತಿ ನಡೆದಿದೆ.

ಭೀಮೇಶ್ವರ ದೇವಸ್ಥಾನದ ರಥೋತ್ಸವ ಹಾಗೂ ಗಾಂಧಿ ಬಜಾರ್ ನ ಬಸವೇಶ್ವರ ದೇವರ ರಥೋತ್ಸವ ನಡೆದಿದೆ. ಈ ರಥೋತ್ಸವು ಸೇರಿ ಇನ್ನೂ ಹಲವೆಡೆ ರಥೋತ್ಸವ ನಡೆದಿದೆ. ಇಲ್ಲಿ ಮಹಾನಗರ ಪಾಲಿಕೆಯ ಸ್ವೀಪ್ ಸಮಿತಿ ಭೇಟಿ ನೀಡಿ ಮತದಾನದ ದಿನದಂದು ಮತ ಹಾಕುವಂತೆ ಮನವಿ ಮಾಡಿಕೊಂಡಿದ್ದಾರೆ.

ಜಾತ್ರಾ, ರಥೋತ್ಸವ ಮಹೋತ್ಸವ ಸೇರಿದಂತೆ ಮಂಗಳವಾರದ ಸಂತೆಯಲ್ಲೂ  ಮತದಾನ ಜಾಗೃತಿ ಕಾರ್ಯಕ್ರಮ ನಡೆಸಲಾಗಿದೆ.‌

ಇದನ್ನೂ ಓದಿ-https://suddilive.in/archives/13532

Related Articles

Leave a Reply

Your email address will not be published. Required fields are marked *

Back to top button