ಶಿಕಾರಿಪುರದಲ್ಲಿ ನಡೆದ ಬ್ರಹ್ಮ ರಥೋತ್ಸವ
ಸುದ್ದಿಲೈವ್/ಶಿಕಾರಿಪುರ
ಶಿಕಾರಿಪುರದ ಹುಚ್ಚರಾಯಾ ಆಂಜನೇಯ ಸ್ವಾಮಿ ದೇವರ ಬ್ರಹ್ಮ ರಥೋತ್ಸವ ಕಾರ್ಯಕ್ರಮ ಭಕ್ತಿ ಭಾವದಿಂದ ನಡೆಯಿತು. ಪಲ್ಲಕ್ಕಿಯಲ್ಲಿ ದೇವರನ್ನ ಕೂರಿಸಿಕೊಂಡು ದೇವರನ್ನ ರಥದಲ್ಲಿ ಕೂರಿಸಿ ರಥ ಎಳೆಯಲಾಯಿತು.
ಬೆಳಗ್ಗೆ ಯಿಂದಲೇ ದೇವರ ದರ್ಶನಕ್ಕೆ ಜನ ಸರದಿ ಸಾಲಿನಲ್ಲಿ ನಿಂತಿರುವ ದೃಶ್ಯ ಲಭ್ಯವಾಗಿದೆ. 9-40 ಕ್ಕೆ ದೇವರ ಪಲ್ಲಕ್ಕಿಯನ್ನ ರಥದ ಬಳಿ ತಂದು ಮೂರು ಸುತ್ತು ಹಾಕಲಾಯಿತು. ನಂತರ ರಥವನ್ನ ಏರಿಸಿ ರಥ ಎಳೆಯಲಾಯಿತು.
ಮಿಥುನ ಲಗ್ನದಲ್ಲಿ ದೇವರ ರಥ ಎಳೆಯಲಾಯಿತು. ಈ ವೇಳೆ ಭ್ರಾಂತೇಶ್ ಮಹರಾಜ್ ಕಿ ಜೈ, ಪವನ ಸುತ ಹನುಮಾನ್ ಕಿ ಜೈ ಎಂಬ ಘೋಷಣೆ ಮೊಳಗಿಸಲಾಯಿತು. ರಥಕ್ಕೆ ಬಾಳೆಹಣ್ಣನ್ನ ಎಸೆಯುವ ಮೂಲಕ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡರು.
ಚೈತ್ರ ಮಾಸದ ಪೂರ್ಣಿಮೆಯ ದಿನವಾದ ಇಂದು ಮಿಥುನ ಲಗ್ನದಲ್ಲಿ ಬ್ರಹ್ಮರಥಕ್ಕೆ ದೇವರನ್ನ ಏರಿಸಲಾಯಿತು.ಈ ವೇಳೆ ರಥಕ್ಕೆ ಗರುಡ ಪಕ್ಷಿಯ ದರ್ಶನ ನಡೆಯಿತು ರಥವನ್ನ ಗರುಡ ರಥದ ಸುತ್ತನ್ನ ಸುತ್ತಿದೆ. ಈ ಕೌತುಕ ಕ್ಷಣದ ನಂತರ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಲಾಯಿತು.
ರಾಜ್ಯದ ಮೂಲ ಮೂಲೆಯಿಂದ ಭಕ್ತರು ಆಗಮಿಸಿ ದೇವರ ದರ್ಶನವನ್ನ ಪಡೆದರು. ಮಕ್ಕಳನ್ನ ಪೋಷಕರು ಭುಜದ ಮೇಲೆ ಕೂರಿಸಿ ರಥೋತ್ಸವದ ದರ್ಶನವನ್ನ ಮಾಡಿರುವುದು ಗಮನಸೆಳೆಯಿತು.
ಮಾಜಿ ಸಿಎಂ ಬಿಎಸ್ ವೈ, ಬಿಜೆಪಿ ರಾಜ್ಯಾಧ್ಯಕ್ಷ ವಿಜೇಂದ್ರ, ಸಂಸದ ರಾಘವೇಂದ್ರ ಕುಟುಂಬ ಬ್ರಹ್ಮರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ-https://suddilive.in/archives/13472