ಮಹಿಳೆ ಸೇರಿ ಐವರು ನಾಪತ್ತೆ ಪ್ರಕರಣ ಸುಖಾಂತ್ಯ
ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಭದ್ರಾವತಿ ಓಲ್ಡ್ ಟೌನ್ ವ್ಯಾಪ್ತಿಯಲ್ಲಿ ಐವರು ಮಕ್ಕಳು ಸೇರಿದಂತೆ ಒರ್ವ ಮಹಿಳೆ ಮಿಸ್ಸಿಂಗ್ ಆಗಿರುವ ಪ್ರಕರಣ ಸುಖಾಂತ್ಯಗೊಂಡಿದೆ. ಕಳೆದ ನವೆಂಬರ್ 11 ರಂದು ಕಾಣೆಯಾದ ಪ್ರಕರಣ ನವೆಂಬರ್ 15 ರಂದು ಸಂಜೆ ಎರಡು ದೂರು ದಾಖಲಾಗಿತ್ತು.
ಏನಾಗಿತ್ತು ಪ್ರಕರಣ
ಇಲ್ಲಿನ ಅನ್ವರ್ ಕಾಲೋನಿಯ ನೆರೆಹೊರೆಯ ಐವರು ಕಾಣೆಯಾಗಿದ್ದಾರೆ. ಓಲ್ಡ್ ಟೌನ್ ಪೊಲೀಸ್ ಸ್ಟೇಷನ್ನಲ್ಲಿ ದಾಖಲಾದ ಎಫ್ಐಆರ್ ಪ್ರಕಾರ, ಮುನ್ನಾ ಎಂಬುವರ ಮೂವರು ಮಕ್ಕಳು ನಾಪತ್ತೆಯಾಗಿದ್ದಾರೆ. ಇನ್ನೊಂದೆಡೆ ಸಮಿವುಲ್ಲಾ ಎಂಬವರ ಪತ್ನಿ ಹಾಗೂ ಇಬ್ಬರು ಮಕ್ಕಳು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿತ್ತು.
ನ.11 ರಂದು ಮುನ್ನಾರವರ ಮೂವರು ಮಕ್ಕಳ ಪೈಕಿ ಹಿರಿಯವಳು, ಸೀಗೆಬಾಗಿ ಯಲ್ಲಿರುವ ಆಸ್ಪತ್ರೆಗೆ ಹೋಗಿಬರುವುದಾಗಿ ಹೇಳಿ ಹೋದವರು ವಾಪಸ್ ಬಂದಿರಲಿಲ್ಲ. ಈ ಸಂಬಂಧ ಎಲ್ಲೆಡೆ ಹುಡುಕಾಡಿದ್ದಾರೆ. ಬಳಿಕ ಸಂಬಂಧಿಕರಲ್ಲಿ ವಿಚಾರಿಸಿದ್ದಾರೆ. ಅಲ್ಲದೆ ದರ್ಗಾಕ್ಕೆ ಹೋಗಿರಬಹುದು ಎಂದು ಲಕ್ಷೇಶ್ವರ ಬಾಬಾ ಬುಡುನ್ ಗಿರಿ,ಚಿಂತಾಮಣಿ, ಹಾಸನದ ಜಾವಗಲ್,ಹಣಗೆರೆ ಕಟ್ಟೆ ಸೇರಿದಂತೆ ವಿವಿಧೆಡೆ ಹುಡುಕಾಡಿದ್ದಾರೆ. ಎಲ್ಲೂ ಸಹ ಪತ್ತೆಯಾಗಿರಲಿಲ್ಲ.
ಬಳಿಕ ಆಸ್ಪತ್ರೆಗೆ ಹೋಗುತ್ತೇನೆ ಎಂದು ಹೋದವರು ನೆರೆಮನೆಯ ಸಮಿವುಲ್ಲಾರ ಪತ್ನಿ ಜೊತೆಗೆ ಹೋಗಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಎರಡು ಮನೆಯವರು ಐವರು ಮಕ್ಕಳು ಸೇರಿದಂತೆ ಓರ್ವ ಮಹಿಳೆ ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ಕೊಡಲಾಗಿತ್ತು.
ಪೊಲೀಸರು ಹುಡುಕಾಟ ತೀವ್ರಗೊಳಿಸಿದ್ದರು. ಮಹಿಳೆ ಸೇರಿ ಐದು ಜನ ಮಕ್ಕಳು ಪತ್ತೆಯಾಗಿದ್ದಾರೆ. ಮೈಸೂರಿನಲ್ಲಿ 6 ಮಂದಿ ಸಿಕ್ಕಿದ್ದು ಇವರನ್ನ ಭದ್ರಾವತಿ ಪೊಲೀಸರು ಕರೆದುಕೊಂಡು ಬಂದಿದ್ದಾರೆ. ವೈಯುಕ್ತಿಕ ಕಾರಣದ ಹಿನ್ನಲೆಯಲ್ಲಿ ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.