ಪಕ್ಷದಲ್ಲಿ ಅಸಮಾಧಾನ ಹೊರಹಾಕಿದ ಹೆಚ್ ಎಂ ಸಿ
ಸುದ್ದಿಲೈವ್/ಶಿವಮೊಗ್ಗ
ಮಾಜಿ ಶಾಸಕರ ಸಂಘದ ಅಧ್ಯಕ್ಷ ಎಚ್.ಎಂ.ಚಂದ್ರಶೇಖರಪ್ಪ ಇಂದು ಸುದ್ದಿಗೋಷ್ಠಿ ನಡೆಸಿ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಕ್ಷದಲ್ಲಿ ಕೆಲವರನ್ನ ನಿರ್ಲಕ್ಷಿಸಲಾಗುತ್ತಿದೆ ಎಂದು ದೂರಿದರು.
ಗಾಜನೂರು ಡ್ಯಾಮ್ ಪಕ್ಕದಲ್ಲಿ ಬೃಂದಾವನ ನಿರ್ಮಾಣ ಮಾಡಬೇಕು. ಆ ನೀರನ್ನು ನೀರಾವರಿಗೆ ಬಳಕೆ ಮಾಡಬೇಕು. ಇದರಿಂದ ಆದಾಯವೂ ಬರಲಿದೆ. ತುಂಗಾ ಮತ್ತು ಭದ್ರಾ ಜಲಾಶಯಗಳ ಪಕ್ಕದಲ್ಲಿ ಬೃಂದಾವನ ಮಾದರಿ ಉದ್ಯಾನ ನಿರ್ಮಾಣ ಮಾಡುವಂತೆ ಒತ್ತಾಯಿಸಿದರು
ಸಿಎಂ ಸಿದ್ದರಾಮಯ್ಯ ಮತ್ತು ನೀರಾವರಿ ಮಂತ್ರಿಗೆ ಮನವಿ ಸಲ್ಲಿಸಿದ್ದೇನೆ. ಮೆಟ್ರೋ ರೈಲು ಸೇವೆಯನ್ನು ಜಿಲ್ಲಾ ವ್ಯಾಪ್ತಿಗೂ ವಿಸ್ತರಣೆ ಮಾಡಬೇಕು.
ಆರಂಭದಲ್ಲಿ ಜನರಿಗೆ ತೊಂದರೆ ಆಗಬಹುದು. ಹಣ ಖರ್ಚಾಗಬಹುದು. ಆದರೆ ಶಾಶ್ವತ ಪರಿಹಾರ ಸಿಗಲಿದೆ ಎಂದರು.
ಪಕ್ಷದಲ್ಲಿ ನನ್ನನ್ನ ಸಕ್ರಿಯವಾಗಿ ಬಳಸಿಕೊಳ್ಳುತ್ತಿಲ್ಲ. ನಾನು ರಾಜ್ಯಾದಯಂತ ಪ್ರವಾಸ ಮಾಡಿ ಪಕ್ಷದ ಪರ ಪ್ರಚಾರ ಮಾಡುತ್ತಿದ್ದೇನೆ. ಜಿಲ್ಲೆಯಲ್ಲಿ ಕೆಲವರನ್ನ ನಿರ್ಲಕ್ಷಿಸುತ್ತಿದೆ. ನಗರ ಸಭೆ ಅಧ್ಯಕ್ಷ ಎಂಎಲ್ ಎ ಆಗಿ ಸೇವೆ ಸಲ್ಲಿಸಿದ್ದೇನೆ. ನನ್ನನ್ನ ಪಕ್ಷ ಪ್ರಚಾರದಲ್ಲಿ ಆಗಲಿ ಅಥವಾ ಯಾವುದೇ ಚಟುವಟಿಕೆಯಲ್ಲಿ ಆಗಲಿ ಬಳಸಿಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ-https://suddilive.in/archives/13254
–