ರಾಷ್ಟ್ರೀಯ ಸುದ್ದಿಗಳು

ಹುಲಿ-ಸಿಂಹಧಾಮ ಮಂಗಳವಾರ ತೆರೆದಿರುತ್ತದೆ

ಸುದ್ದಿಲೈವ್/ಶಿವಮೊಗ್ಗ

ಯುಗಾದಿ ಹಬ್ಬದ ದಿನವೂ ಶಿವಮೊಗ್ಗದ ಹೊರವಲಯದಲ್ಲಿರುವ ಲಯನ್ ಸಫಾರಿಯಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಅವಾಕಾಶ ಕಲ್ಪಿಸಲಾಗಿದೆ.

ಈ ಹಿಂದೆ ಹಬ್ಬ ಹರಿದಿನಗಳಲ್ಲಿ ರಜಾವಿರುತ್ತಿದ್ದ ಲಯನ್ ಸಫಾರಿ ಈಗ ಹಬ್ಬ ಹರಿದಿನಗಳಲ್ಲೂ ಬಾಗಿಲು ತೆರೆದಿರುವುದು ಪ್ರವಾಸಿಗರಿಗೆ ಸಹಿ ಸುದ್ದಿ ನೀಡಿದಂತಾಗಿದೆ.

ಹುಲಿ-ಸಿಂಹಧಾಮ, ತ್ಯಾವರೆಕೊಪ್ಪಕ್ಕೆ ಆಗಮಿಸುವ ಪ್ರವಾಸಿಗರ ಅನುಕೂಲಕ್ಕಾಗಿ ಹುಲಿ-ಸಿಂಹಧಾಮದಲ್ಲಿನ ಝೂ ಹಾಗೂ ಸಫಾರಿ ವೀಕ್ಷಣೆಯು ಯುಗಾದಿ ಹಬ್ಬದ ಪ್ರಯುಕ್ತ ಏ.09 ರ ಮಂಗಳವಾರವೂ ಸಹ ತೆರೆದಿರುತ್ತದೆ.

ಇದರ ಸದುಪಯೋಗವನ್ನು ಪ್ರವಾಸಿಗರು ಪಡೆದುಕೊಳ್ಳಬಹುದಾಗಿರುತ್ತದೆ ಎಂದು ಹುಲಿ-ಸಿಂಹಧಾಮದ ಕಾರ್ಯ ನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

ಇದನ್ನೂ ಓದಿ-https://suddilive.in/archives/12247

Related Articles

Leave a Reply

Your email address will not be published. Required fields are marked *

Back to top button