ರಾಜಕೀಯ ಸುದ್ದಿಗಳು

ಕುತೂಹಲ ಮೂಡಿಸಿದ ನಾಯಕರ ಬೇಟಿ

ಸುದ್ದಿಲೈವ್/ಶಿವಮೊಗ್ಗ

ಎವೆರಿಥಿಂಗ್ ಇಸ್ ಫೈರ್ ಇನ್ ಲವ್ ಅಂಡ್ ವಾರ್ ಹಾಗೂ ಪೊಲೀಟಿಕ್ಸ್ ಎಂಬ ಮಾತೊಂದು‌ ಈ ಇಬ್ಬರ ನಾಯಕರ ಭೇಟಿಯಿಂದ ಕಾಣಿಸಿಕೊಂಡಿದೆ. ಸಂಸದ ರಾಘವೇಂದ್ರ ಮತ್ತು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರ ಭೇಟಿ ಸೌಹಾರ್ಧವೆನಿಸಿದರೂ ಅವರ ಭೇಟಿಯ ಹಿಂದೆ ಕುತೂಹಲ ಮೂಡಿಸಿದೆ.

ಸೊರಬದಲ್ಲಿ ಇಂದು ಬೂತ್ ಮಟ್ಟದ ಬಿಜೆಪಿ ಕಾರ್ಯಕರ್ತರ ಸಭೆ ನಡೆದಿದೆ. ಸಭೆಗೆ ಬರುವಂತೆ ಸಂಸದರು ಮಾಜಿ ಸಚಿವರನ್ನ ಆಹ್ವಾನಿಸಿದ್ದಾರೆ. ಈ ಭೇಟಿ ಬೇರೆಯವರಿಗೆ ಸೌಹಾರ್ಧ ಎನಿಸಿದರೂ ಭೇಟಿಯ ಹಿಂದೆ ಕುತೂಹಲವಂತು ಮೂಡಿದೆ.

ಮಾಜಿ ಸಚಿವ ಕುಮಾರ್ ಬಂಗಾರಪ್ಪ ಕಳೆದ 9 ತಿಂಗಳ ಹಿಂದೆ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಸೋತು ಪಕ್ಷದ ಎಲ್ಲಾ ಕಾರ್ಯಕ್ರಮದಿಂದ ದೂರವಿದ್ದ ಕುಮಾರ್ ಬಂಗಾರಪ್ಪ, ಇನ್ನೇನು ಕಾಂಗ್ರೆಸ್ ಪಕ್ಷಕ್ಕೆ ಸೇರಿ ಎಂಪಿ ಸ್ಥಾನಕ್ಕೆ ಸ್ಪರ್ಧಿಸುತ್ತಾರೆ ಎನ್ನುವಷ್ಟರಲ್ಲಿ ಮೋದಿ ಶಿವಮೊಗ್ಗದ ಭೇಟಿಯ ವೇಳೆ ವೇದಿಕೆಯ ಮೇಲೆ ಕಾಣಿಸಿಕೊಂಡರು.

ನಂತರ ಸೋಷಿಯಲ್ ಮೀಡಿಯಾಗಳಲ್ಲಿ ಬಿಜೆಪಿ ಪಕ್ಷದ ಚಿಹ್ನೆ ಅಡಿ ಪೋಸ್ಟ್ ಗಳನ್ನ ಹಾಕಲಾರಂಭಿಸಿದರು. ಸಂಸದ ರಾಘವೇಂದ್ರ ಸಹ ಮಾಧ್ಯಮಗಳಿಗೆ ಅವರು ಎಲ್ಲೂ ಹೋಗೊಲ್ಲ. ಪ್ರಚಾರಕ್ಕೆ ಬರ್ತಾರೆ ಎಂದು ವಿಶ್ವಾಸ ತೋರ್ಪಡಿಸಿದರು.

ಇಂದು ನಡೆಯುವ ಸಭೆಗಾಗಿ ಬೆಂಗಳೂರಿನಿಂದಲೇ ಕರೆ ತಂದು ಸೊರಬದಲ್ಲಿ ಕುಮಾರ್ ಬಂಗಾರಪ್ಪನವರ ಮನೆಯಲ್ಲಿ ಉಬಯ ಕುಷಲೋಪರಿ ಭೇಟಿ ನಡೆಸಿ ಸಭೆಗೆ ತೆರಳಿದ್ದಾರೆ.

ಸಂಸದರು ಸಹ ಇಷ್ಟು ದಿನ ತಮ್ಮ ಮಾಹಿತಿ ನೀಡುವ ವಾಟ್ಸಪ್ ಗ್ರೂಪ್ ನಲ್ಲಿ ಕುಮಾರ್ ಬಂಗಾರಪ್ಪನವರನ್ನ‌ ಭೇಟಿ ಮಾಡಿರುವ ಬಗ್ಗೆ ಪೋಟೊ ವಿಡಿಯೋಗಳನ್ನ ಹಂಚಿಕೊಂಡಿರಲಿಲ್ಲ. ಆದರೆ ಚುನಾವಣೆಯ ಸಂದರ್ಭದಲ್ಲಿ ಮಾಜಿ ಸಚಿವರೊಂದಿಗಿನ ಭೇಟಿ ಹಾಗೂ ಹಂಚಿಕೊಂಡ ಫೋಟೊ ಎರಡೂ ಕುತೂಹಲ ಮೂಡಿಸಿದೆ.

ಇದನ್ನೂ ಓದಿ-https://suddilive.in/archives/12101

Related Articles

Leave a Reply

Your email address will not be published. Required fields are marked *

Back to top button