ಸ್ಥಳೀಯ ಸುದ್ದಿಗಳು

ಕಾಂತೇಶ್ ರನ್ನ ಬಿಗಿದಪ್ಪಿ ಕಣ್ಣೀರು ಹಾಕಿದ ಅಭಿಮಾನಿ

ಸುದ್ದಿಲೈವ್/ಶಿವಮೊಗ್ಗ

ಪುತ್ರನಿಗೆ ಹಾವೇರಿ-ಗದಗ ಲೋಕಸಭಾ‌ ಕ್ಷೇತ್ರಕ್ಕೆ ಪುತ್ರ ಕಾಂತೇಶ್ ಗೆ ಟಿಕೇಟ್ ಕೈತಪ್ಪಿದ ಬೆನ್ನಲ್ಲೇ ಇಂದು ಈಶ್ವರಪ್ಪನವರು ಬಂಜಾರ ಕನ್ವೇಷನಲ್ ಹಾಲ್ ನಲ್ಲಿ ಇನ್ನೂ ಕೆಲವೇ ಕ್ಷಣದಲ್ಲಿ ರಾಷ್ಟ್ರಭಕ್ತರ ಅಭಿಪ್ರಾಯ ಸಭೆ ಮಡೆಸಲಿದ್ದಾರೆ. ಹಿನ್ನಲೆಯಲ್ಲಿ ಉತ್ತರ ಕರ್ನಾಟಕದಿಂದ ಅಭಿಮಾನಿಗಳು ಆಗಮಿಸುತ್ತಿದ್ದಾರೆ.

ಕಾಂತೇಶ್ ಗೆ ಟಿಕೇಟ್ ಕೈತಪ್ಪಿದ ಬೆನ್ನಲ್ಲೇ ಅಭಿಮಾನಿಯೊಬ್ಬ ಕಾಂತೇಶ್ ಅವರನ್ನ ಅಪ್ಪಿಕೊಂಡು ಕಣ್ಣೀರು ಇಟ್ಟಿರುವ ಘಟನೆ ನಡೆದಿದೆ. ಹಾವೇರಿ-ಗದಗ ಲೋಕಸಭಾ ಕ್ಷೇತ್ರದಿಂದ ಆಗಮಿಸಿದ ಗಣೇಶ್ ಕುಸ್ಗಲ್ ಕಾಂತೇಶ್ ಅವರನ್ನ ಬಿಗಿದಪ್ಪಿಕೊಂಡು ಕಣ್ಣೀರು ಸುರಿಸಿದ್ದಾರೆ.

ಈ ಬಗ್ಹೆ ಮಾತನಾಡಿದ ಗಣೇಶ್ ಹಿಂದುತ್ವಕ್ಕಾಗಿ ಕಾಂತೇಶ್ ನಮ್ಮ ಕ್ಷೇತ್ರದಲ್ಲಿ ಸಂಘಟನೆ ಮಾಡಿದ್ದಾರೆ. ಅವರಿಗೆ ಟಿಕೆಟ್ ಕೈತಪ್ಪಿರುವುದು ಬೇಸರ ತಂದಿದೆ. ಅವರು ಬಂಡಾಯ ಘೋಷಿಸಿದರೆ ಗೆ್ಲಿಸಿಕೊಂಡು ಬರುವುದಾಗಿ ಹೇಳಿದ್ದಾರೆ.

ಸಧ್ಯಕ್ಕೆ ಮಾಜಿ ಕಾರ್ಪರೇಟರ್ ಇಬ್ಬರು ಆಗಮಿಸಿದ್ದಾರೆ. ಗನ್ಮಿ ಶಂಕರ್ ಮತ್ತು ಪ್ರಭು, ಇ.ವಿಶ್ವಾಸ್, ಸರೇಖಾ‌ ಮುರಳೀಧರ್ ಸಭಾಂಗಣದಲ್ಲಿ ಉಪಸ್ಥಿತರಿದ್ದು ಸಭೆ ಒಳಗೆ ಇನ್ನೂ ಪ್ರವೇಶಿಸಬೇಕಿದೆ. ಈಶ್ವರಪ್ಪನವರು ಇನ್ನೂ ಆಗಮಿಸಬೇಕಿದೆ. ಬಂಡಾಯದ ಕಹಳೆ ಫಿಕ್ಸ್ ಎಂಬ‌ ಮಾಹಿತಿ ಆಪ್ತವಲಯದಿಂದ ಕೇಳಿಬಂದರೂ ರೂಪು ರೇಷಗಳು ತಿಳಿದು ಬರಬೇಕಿದೆ.

ಇದನ್ನೂ ಓದಿ-https://suddilive.in/archives/10772

Related Articles

Leave a Reply

Your email address will not be published. Required fields are marked *

Back to top button