ನಗರ ಸುದ್ದಿಗಳು
ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಎಂದು ಅತಿರುದ್ರ ಯಾಗ
ಸುದ್ದಿಲೈವ್/ಶಿವಮೊಗ್ಗ
ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಲಿ ಎಂದು ವಿನೋಬ ನಗರದ ಶಿವಾಲಯದಲ್ಲಿ ಅತಿರುದ್ರ ಮಹಾಯಾಗ ಆರಂಭಗೊಂಡಿದೆ.
ಅತಿರುದ್ರ ಮಹಾಯಾಗ ಸಂಚಲನ ಸಮಿತಿ ಮತ್ತುಭಕ್ತಿವೃಂದದಿಂದ ನಡೆಯುತ್ತಿರುವ ಈ ಯಾಗಕ್ಕಾಗಿ 11 ಅಗ್ನಿ ಕುಂಡವನ್ನ ನಿರ್ಮಿಸಲಾಗಿದೆ. 121 ಋತ್ವಿಜರನ್ನ ನೇಮಿಸಲಾಗಿದೆ. ಭಾರತೀಯ ಜನತಾ ಪಾರ್ಟಿ ಹಾಗೂ ಶಿವಮೊಗ್ಗ ಜನತೆಯ ಪರವಾಗಿ ನಡೆಸಲಾಗುತ್ತಿದೆ.
ಮಹಾಯಾಗದಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಸಂಸದ ರಾಘವೇಂದ್ರ, ಮಾಜಿ ಡಿಸಿಎಂ ಈಶ್ವರಪ್ಪ, ಶಾಸಕ ಚೆನ್ನಬಸಪ್ಪ ಮೊದಲಾದ ನಾಯಕರು ಭಾಗಿಯಾಗಿದ್ದಾರೆ.
ಇದನ್ನೂ ಓದಿ-https://suddilive.in/archives/10073