ಕ್ರೈಂ ನ್ಯೂಸ್

ಅಕ್ರಮ ಗೋವು ಸಾಗಾಟ-ಇಬ್ಬರ ಮೇಲೆ ಹಲ್ಲೆ

ಸುದ್ದಿಲೈವ್/ಶಿವಮೊಗ್ಗ

ಅಕ್ರಮ ಗೋವು ಸಾಗಾಟ ಆರೋಪ ಹಿನ್ನೆಲೆಯಲ್ಲಿ ಗ್ರಾಮಸ್ಥರಿಂದ ವಾಹನ ಚಾಲಕ ಸೇರಿ ಇಬ್ಬರ ಮೇಲೆ ಹಲ್ಲೆ ನಡೆದಿದೆ. ಓರ್ವನನ್ನ ಮೆಗ್ಗಾನ್ ಗೆ ದಾಖಲಿಸಲಾಗಿದೆ.

ತೀರ್ಥಹಳ್ಳಿ ತಾಲೂಕಿನ ಕುರುವಳ್ಳಿ ಗ್ರಾಮದಲ್ಲಿ ಅಕ್ರಮ ಗೋವುಳನ್ನ ಸಾಗಿಸಲಾಗುತ್ತಿದೆ ಎಂಬ ಆರೋಪದ ಮೇರೆಗೆ ವಾಹನವನ್ನ ತಡೆದು ಗ್ರಾಮಸ್ಥರು ಗಲಾಟೆ ನಡೆಸಲಾಗಿದೆ.‌

ಗಲಾಟೆಯಲ್ಲಿ‌ ಹಲ್ಲೆಗೊಳಗಾದವರು ಉದಯ್ ಕುಮಾರ್ ಹಾಗೂ ರಾಹೀದ್ ಎಂದು ಗುರುತಿಸಲಾಗಿದೆ. ರಾಹೀದ್ ಸ್ಥಿತಿ ಗಂಭೀರ, ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಗೆ ರವಾನಿಸಲಾಗಿದೆ. ಪ್ರಕರಣ ಸಂಬಂಧ ಹಲ್ಲೆ ಮಾಡಿದವರ  ಮೇಲೆ ಪ್ರಕರಣ ದಾಖಲಾಗಿದೆ.

‌ಈ ಕುರಿತು ಸುದ್ದಿಲೈವ್ ಗೆ ಮಾಹಿತಿ ನೀಡಿದ ಮಿಥುನ್ ಕುಮಾರ್,,  ಹತ್ತಕ್ಕೂ ಹೆಚ್ಚು ಜನರ ಮೇಲೆ ಕೇಸ್  ಆಗಿದೆ. ಇದರಲ್ಲಿ ಏಳು ಜನರನ್ನ‌ಧಿಸಲಾಗಿದೆ.ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ-https://suddilive.in/archives/10289

Related Articles

Leave a Reply

Your email address will not be published. Required fields are marked *

Back to top button