ಸ್ಥಳೀಯ ಸುದ್ದಿಗಳು

ಸಾಗರದ ನಗರಸಭೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ಮಾತಿನ ಚಕಮಕಿ

ಸುದ್ದಿಲೈವ್/ಸಾಗರ

ಸಾಗರ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ನಡುವೆ ಮಾತಿನ ಚಕಮಕಿ ನಡೆದಿದೆ.‌ ಸದಸ್ಯರೆಲ್ಲರೂ ಬಾವಿಗಿಳಿದು ಹೋರಾಟ ನಡೆಸಿದ್ದಾರೆ.

ನಗರಸಭೆಯ ಆಡಳಿತ ಅಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಕುಮಾರಿ ಪಲ್ಲವಿ ಸಾತೇನಹಳ್ಳಿ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಸಭೆಯಲ್ಲಿ ಭಾಗಿಯಾಗಿದ್ದರು.

ಸಾಗರದ ಬಿ.ಹೆಚ್ ರಸ್ತೆಯಲ್ಲಿ ಜಾಗವೊಂದರ ವಿಚಾರದಲ್ಲಿ ಮಾಜಿ ಶಾಸಕರು ಸೇರಿದಂತೆ 14 ಜನರ ಮೇಲೆ ಎಫ್ಐಆರ್ ದಾಖಲಾಗಿರುತ್ತದೆ. ಇದನ್ನ ಪ್ರಶ್ನಿಸಿ ಬಿಜೆಪಿ ಸದಸ್ಯೆ ಮಧುರಾ ಶಿವಾನಂದ್ ಸಭೆಯಲ್ಲಿ ಚರ್ಚೆಗೆ ಆರಂಭಿಸುತ್ತಾರೆ. ಇದು ಸಭೆಯಲ್ಲಿ ಚರ್ಚಿಸುವ ವಿಷಯವಲ್ಲ ಎಂದು ಕಾಂಗ್ರೆಸ್ ಸದಸ್ಯೆ ಲಲಿತಮ್ಮ ಆಗ್ರಿಸುತ್ತಾರೆ.

ಈ ವಿಷಯ ಸೇರಿದಂತೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ನಗರಸಭೆಯ ಸದಸ್ಯ ಟಿ ಡಿ ಮೇಘರಾಜ್ ರವರು ಆಕ್ರೋಶ ವ್ಯಕ್ತಪಡಿಸಿ ಸಭೆಯಲ್ಲಿ ಕಾಂಗ್ರೆಸ್ ಗೆ ಬಹುಮತವಿಲ್ಲ ಮೀಸಲಾತಿ ತಂದು ಅಧ್ಯಕ್ಷರನ್ನ ಆಯ್ಕೆ ಮಾಡಿಕೊಳ್ಳಲಾಗಲಿಲ್ಲವೆಂದು ಸಭೆಗೆ ತಿಳಿಸಿದ್ದಾರೆ. ಈ ವಿಷಯದ ಬಗ್ಗೆ ಮಾತನಾಡಿದ ಶಾಸಕ ಗೋಪಾಲ ಕೃಷ್ಣ ಬೇಳೂರು ಮಾತನಾಡಿ ಮೇಘರಾಜ್ ಅವರಿಗೆ ಈ ವಿಷಯದ ಬಗ್ಗೆ ಮಾತನಾಡಬೇಡಿ ಇದು ನ್ಯಾಯಾಲಯದಲ್ಲಿದೆ ಎಂದಾಗ ಬಿಜೆಪಿ ಅಷ್ಟು ಸದಸ್ಯರು ಬಾವಿಗೆ ಇಳಿದು ಪ್ರತಿಭಟಿಸಿದ್ದಾರೆ.

ಸದಸ್ಯರಿಗೆ ಸಮಾಧಾನ ಮಾಡಲು ಶಾಸಕ ಗೋಪಾಲಕೃಷ್ಣ ಬೇಳೂರು ಪ್ರಯತ್ನಿಸಿದ್ದಾರೆ. ನಗರಸಭೆ ಆಡಳಿತ ಅಧಿಕಾರಿ ಹೆಚ್ ನಾಗಪ್ಪ ಬಿಜೆಪಿ ಸದಸ್ಯರನ್ನ ಸಮಾಧಾನ ಪಡಿಸಿ ಅವರ ಆಸ್ಥಾನಕ್ಕೆ ಕರೆದುಕೊಂಡು ಹೋದರೆ ಕಾಂಗ್ರೆಸ್ ನ  ತಸ್ರೀಫ್ ನವರ ಮಧ್ಯಸ್ಥಿಕೆಯಲ್ಲಿ ಸಮಾಧಾನ‌ಪಡಿಸಲಾಯಿತು.  ಮತ್ತೆ ಸಭೆ ಮುಂದು ವರೆದಿದೆ.

ಇದನ್ನೂ ಓದಿ-https://suddilive.in/archives/5489

Related Articles

Leave a Reply

Your email address will not be published. Required fields are marked *

Back to top button