ಸಾಮಾಜಿಕ ಬಹಿಷ್ಕಾರದ ಪ್ರಕರದಲ್ಲಿ 19 ಜನರ ವಿರುದ್ಧ ಎಫ್ಐಆರ್
ಸುದ್ದಿಲೈವ್/ಶಿವಮೊಗ್ಗ
ದಲಿತ ಯುವತಿಯನ್ನ ಪ್ರೀತಿಸಿ ಮದುವೆಯಾದ ಯುವಕ ಹಾಗೂ ಆತನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ಕುಂಸಿ ಪೊಲೀಸ್ ಠಾಣೆಯಲ್ಲಿ 19 ಜನರ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲಾಗಿದೆ.
ದಲಿತ ಯುವತಿಯನ್ನ ಪ್ರೀತಿಸಿ ಮದುವೆಯಾದ ಹಿಂದುಳಿದ ವರ್ಗದ ಜೋಗಿ ಸಮುದಾಯದ ಯುವಕ ಹಾಗೂ ಕುಟುಂಬಕ್ಕೆ ಗ್ರಾಮ ಬಹಿಷ್ಕಾರ ಹಾಕಿದ್ದು, ಯಾರೂ ಕೂಡ ಯುವಕನ ಮನೆಗೆ ತೆರಳದಂತೆ ಹಾಗೂ ಅವರು ಬೇರೆಯವರ ಮನೆಗೆ ತೆರಳದಂತೆ ನಿರ್ಬಂಧ ಹಾಕಲಾಗಿದೆ.
ಶಿವಮೊಗ್ಗದ ಹೊರಬೈಲು ಗ್ರಾಮದಲ್ಲಿ ಸಾಮಾಜಿಕ ಬಹಿಷ್ಕಾರದ ಅನಿಷ್ಟ ಆಚರಣೆ ಜಾರಿಯಾಗಿರುವುದು ಹಿಂದೂ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಮದುವೆ ಬಗ್ಗೆ ಅಸಮಾಧಾನಗೊಂಡ ಗ್ರಾಮದ ಮುಖಂಡರಿಂದ ಸಾಮಾಜಿಕ ನಿರ್ಬಂಧ ಹಾಕಲಾಗಿದೆ. ಗ್ರಾಮಸ್ಥರು ಈ ಕುಟುಂಬದೊಂದಿಗೆ ಮಾತನಾಡಿದ್ರೇ 1 ಸಾವಿರ ರೂ. ದಂಡದ ಎಚ್ಚರಿಕೆ ನೀಡಲಾಗಿದ್ದು, ಯಾರಾದ್ರೂ ಮಾತನಾಡಿರುವ ಮಾಹಿತಿ ನೀಡಿದವರಿಗೆ 500 ರೂ. ಇನ ನೀಡಲು ಗ್ರಾಮಸ್ಥರು ಮುಂದಾಗಿರುವುದು ಅನಿಷ್ಠ ಪದ್ಧತಿ ಇನ್ನೂ ಜೀವಂತವಾಗಿಸಿರುವುದು ದುರಂತವೆನಿಸಿದೆ.
ಕಳೆದ 3 ತಿಂಗಳ ಹಿಂದೆಯಷ್ಟೇ ದಿನೇಶ್ ಹಾಗೂ ಪ್ರೀತಿ ಎಂಬುವರ ವಿವಾಹವಾಗಿತ್ತು. ಪರಸ್ಪರ ಪ್ರೀತಿಸಿ ಇಬ್ಬರು ವಿವಾಹವಾಗಿದ್ದರು. ಆದಿ ಕರ್ನಾಟಕ ಸಮುದಾಯದ ಯುವತಿ ಮದುವೆಯಾಗಿದ್ದಕ್ಕೆ ಸಮುದಾಯದವರ ಆಕ್ರೋಶ ವ್ಯಕ್ತವಾಗಿದೆ. ಹೊರೆಬೈಲಿನಲ್ಲಿ ಸುಮಾರು 80 ಜೋಗಿ ಸಮುದಾಯದ ಮನೆಗಳಿವೆ.
ಮದುವೆಯಾದ ಯುವಕನ ಕುಟುಂಬದ ಜೊತೆಗೆ ಚಿಕ್ಕಪ್ಪನ ಕುಟುಂಬಕ್ಕೂ ಬಹಿಷ್ಕಾರ ಹಾಕಲಾಗಿದೆ. ಮದುವೆಗೆ ಸಹಕರಿಸಿದ್ದಕ್ಕೆ ಚಿಕ್ಕಪ್ಪನ ಕುಟುಂಬಕ್ಕೂ ಬಹಿಷ್ಕಾರ ಹಾಕಲಾಗಿದೆ. ನೊಂದ ಯುವತಿಯಿಂದ ಗ್ರಾಮಸ್ಥರ ವಿರುದ್ಧ ಕುಂಸಿ ಪೊಲೀಸರಿಗೆ ದೂರುನೀಡಲಾಗಿದೆ.
ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 19 ಕ್ಕೂ ಹೆಚ್ಚು ಜನರ ವಿರುದ್ಧ ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಅಧಿಕಾರಿಗಳ ತಂಡ ಹೊರಬೈಲು ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಶಿವಮೊಗ್ಗ ತಹಶೀಲ್ದಾರ್ ನಾಗರಾಜ್, ಡಿವೈಎಸ್ಪಿ ಸುರೇಶ್, ಕುಂಸಿ ಇನ್ಸ್ಪೆಕ್ಟರ್ ಹರೀಶ್ ಪಾಟೀಲ್ ಸೇರಿದಂತೆ ಅಧಿಕಾರಿಗಳ ಭೇಟಿ ನೀಡಿದ್ದಾರೆ.
ಬಹಿಷ್ಕಾರ ಸಂಬಂಧಿಸಿದಂತೆ ಗ್ರಾಮಸ್ಥರ ಜೊತೆ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ. ಈ ರೀತಿ ಮಾಡದಂತೆ ತಿಳುವಳಿಕೆ ನೀಡಿ, ಕಾನೂನು ಕ್ರಮದ ಎಚ್ಚರಿಕೆ ಸಹ ಅಧಿಕಾರಿಗಳು ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ತಹಶೀಲ್ದಾರ್ ನಾಗರಾಜ್ ಎನ್ ಜೆ, ಬಿತ್ತಿತ್ರ ಅಥವಾ ಕರಪತ್ರ ಹಾಕಿಲ್ಲ. ಅವರ ಮನವೊಲಿಸಲಾಗಿದೆ. ಆದರೂ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ. ಅದು ತನಿಖೆಯಾಗಲಿದೆ ಎಂದು ತಿಳಿಸಿದರು.
ಇದನ್ನೂ ಓದಿ-https://suddilive.in/archives/5752