ಬಿಜೆಪಿ ಎಸ್ ಸಿ ಮೋರ್ಚಾದ ಕಾರ್ಯಕ್ರಮದಲ್ಲಿ ಪಕ್ಷಕ್ಕೆ ಮುಜುಗರವಾಗಲಿಲ್ವಾ?
ಸುದ್ದಿಲೈವ್/ಶಿವಮೊಗ್ಗ
ಹೊಳಲೂರಿನಲ್ಲಿ ನಡೆದ ಬಿಜೆಪಿ ಎಸ್ ಸಿ ಮೋರ್ಚದ ವತಿಯಿಂದ ನಡೆದ ಎಸ್ ಸಿ ಮುನ್ಬಡೆ ಸಮಾವೇಶದಲ್ಲಿ ಸಂಸದ ರಾಘವೇಂದ್ರ ಅವರು ಮಾತನಾಡುವ ವೇಳೆ ಜನ ಖಾಲಿ ಖಾಲಿ ಆಗಿರುವ ಘಟನೆ ನಡೆದಿದೆ.
ಸಂಜೆ ಸುಮಾರು 4 ಸಮಯದಲ್ಲಿ ಕಾರ್ಯಕ್ರಮ ಆರಂಭಗೊಳ್ಳಬೇಕಿದ್ದ ಕಾರ್ಯಕ್ರಮ 7 ಗಂಟೆಯಾದರೂ ಆರಂಭವಾಗದೆ ಇರುವ ಕಾರಣಕ್ಕೆ ಜನ ಮಧ್ಯದಲ್ಲಿಯೇ ಎದ್ದು ಹೋದರು.
ಸಭೆ ಆರಂಭದಲ್ಲಿ ಜನ ಭರ್ಜರಿಯಾಗಿ ಸೇರಿದ್ದರು. ಆದರೆ ಕೊಳ್ಳಗಾಲದ ಮಾಜಿ ಸಾಸಕ ಎನ್ ಮಹೇಶ್ ಭಾಷಣ ಆರಂಭ ವಾಗುತ್ತಿದ್ದಂತೆ ಜನ ಖಾಲಿಯಾಗಿದ್ದಾರೆ. ಸಂಸದ ರಾಘವೇಂದ್ರ ಭಾಷಣ ಮಾಡುವ ಹೊತ್ತಿಗೆ ಜನ ಅರ್ಧ ಖಾಲಿಯಾಗಿದ್ದರು.
ಎರಡನೇ ಭಾಷಣಕಾರರಾಗಿ ಸಂಸದರು ಬಂದರೂ ಕಾರ್ಯಕ್ರಮದ ಮಧ್ಯೆ ಜನ ಎದ್ದುಹೋಗಿದ್ದಾರೆ. ಇನ್ಬೂ ಗಣ್ಯ ವ್ಯಕ್ತಿಗಳು ಶಾಸಕ ಚೆನ್ನಬಸಪ್ಪನವರು ಮಾತನಾಡಲು ಬಾಕಿ ಇದ್ದಾಗಲೇ ಈ ಘಟನೆ ಬಿಜೆಪಿಗೆ ಮುಜುಗರ ತಂದಿದೆ. ಈ ಕ್ಷೇತ್ರದ ಮಾಜಿ ಶಾದಕರೂ ಮಾತನಾಡಬೇಕಿತ್ತು. ಆದರೆ ಜನ ಖಾಲಿಯಾಗಿದ್ದಾರೆ.
ಈ ಘಟನೆ ಬಿಜೆಪಿಗೆ ಸೈ್ಸ್ ಮೈದಾನದಲ್ಲಿ ನಡೆಯುವ ವೇಳೆಯಲ್ಲೇ ಬಿಸಿ ತಟ್ಟಿತ್ತು. ಆದರೆ ಎಚ್ಚೆತ್ತುಕೊಳ್ಳದ ಬಿಜೆಪಿಗೆ ಮತ್ತೊಂದು ಮುಜುಗರ ಎದುರಾಗಿದೆ. ಮಾಜಿ ಶಾಸಕ ಅಶೋಕ್ ನಾಯ್ಕ್ ಖಾಲಿ ಕುರ್ಚಿಗೆ ಭಾಷಣ ಮಾಡಿ ರಾಘವೇಂದ್ರರನ್ನ ಗೆಲ್ಲಿಸಬೇಕು ಎಂದು ಕರೆ ನೀಡಿರುವುದು ನಗೆಪಾಟಲಿಗೆ ಗುರಿಯಾಯಿತು?
ಇದನ್ನೂ ಓದಿ-https://suddilive.in/archives/12655