ಸ್ಥಳೀಯ ಸುದ್ದಿಗಳು

ತೀರ್ಥಹಳ್ಳಿಯಲ್ಲಿ ನಡೆದ ಘಟನೆ-ಗೊಂದಲದ ಗೂಡಾದ ಪ್ರಕರಣ

ಸುದ್ದಿಲೈವ್/ತೀರ್ಥಹಳ್ಳಿ

ತೀರ್ಥಹಳ್ಳಿ ಸಾಲೂರು ಗ್ರಾಮದ ಹಾರೋಗದ್ದೆ ಗ್ರಾಮದಲ್ಲಿ ಮಂಗನನ್ನ‌ಓಡಿಸುವ ನಳಿಕೆ ಮೂಲಕ ಪ್ರಾಣಿಯನ್ನ ಓಡಿಸುವ ಸಿಡಿ ಮದ್ದು ಬಳಸಲು ಹೋಗಿ ವ್ಯಕ್ತಿಯೋರ್ವನ ಕೈಗೆ ಗಾಯವಾಗಿದೆ.

ಗಾಯಾಳುವನ್ನ ನಾಗರಾಜ್ ಎಂದು ಗುರುತಿಸಲಾಗಿದೆ. ಚಿಕಿತ್ಸೆಗಾಗಿ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ ರಾತ್ರಿ ಮಂಗನನ್ನ ಓಡಿಸಲು ಸಿಡಿಮದ್ದು ಬಳಸಲು ಹೋಗಿ ವ್ಯಕ್ತಿಯ ಕೈಗೆ ಗಾಯವಾಗಿದೆ.

ಕೆಲವರ ಪ್ರಕಾರ ಯೂಟ್ಯೂಬ್​ನಲ್ಲಿ ಊದ್ದದ ನಳಿಕೆ ಬಳಸಿ ಅದರ ಮೂಲಕ ಪಟಾಕಿ ಸಿಡಿಸಿ ಮಂಗಗಳನ್ನು ಓಡಿಸುವ ವಿಡಿಯೋ ನೋಡಿದ್ದಾನೆ. ಅದರಂತೆ ತಯಾರಿ ಮಾಡಿದ್ದನು ಎನ್ನಲಾಗಿದೆ.‌ ಬೇಕಾದ ಉಪಕರಣಗಳನ್ನ ಬಳಸಿ ರೆಡಿಮಾಡಿಕೊಂಡಿದ್ದ. ಉಪಕರಣದಲ್ಲಿ ನಳಿಕೆ ತುದಿಯಲ್ಲಿ ಸಣ್ಣ ಪಟಾಕಿ ಬದಲು ಗರ್ನಲ್ ಇಟ್ಟು ಬೆಂಕಿ ಕೊಟ್ಟಿದ್ದಾನೆ. ಅದು ಉರಿಯದಿರುವುದನ್ನ ನೋಡಿ ನಳಿಕೆ ತುದಿಗೆ ಕೈ ಹಾಕಿದಾಗ ಗರ್ನಲ್ ಸ್ಫೋಟಗೊಂಡಿದೆ ಎನ್ನಲಾಗಿದೆ.

ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗುತ್ತಿಲ್ಲ. ಕೆಲವರ ಪ್ರಕಾರ ಸೈಕಲ್ ನ ಬಾಲ್ ಬೇರಿಂಗ್ಸ್ ಬಳಸಿ ಹೊಡೆಯಲು ಹೋಗಿ ಕೈ ಗಾಯವಾಗಿದೆ ಎಂಬ ಮಾಹಿತಿಯೂ ಇದೆ. ಒಟ್ಟಿನಲ್ಲಿ ಘಟನೆ ನಡೆದಿರುವುದು ಸತ್ಯವಾದರೂ ಯಾವ ರೀತಿ ಎಂಬುದು ಗೊಂದಲ ಮುಂದುವರೆದಿದೆ.

ಇದನ್ನೂ ಓದಿ-https://suddilive.in/archives/10497

Related Articles

Leave a Reply

Your email address will not be published. Required fields are marked *

Back to top button