ಸ್ಥಳೀಯ ಸುದ್ದಿಗಳು

ಸೆ.12 ರಂದು ಸ್ಮಾರ್ಟ ಸಿಟಿ ಕುಂದು ಕೊರತೆ ಅಹವಾಲು ಸ್ವೀಕಾರ ಸಭೆ

ಸುದ್ದಿಲೈವ್/ಶಿವಮೊಗ್ಗ

ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನ ಅನುಷ್ಠಾನಗೊಳಿಸಲು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವ ಸಭೆಯನ್ನ ಸೆ.12 ರಂದು ಕುವೆಂಪು ರಂಗ ಮಂದಿರದಲ್ಲಿ ಏರ್ಪಡಿಸಲಾಗಿದೆ.

ಅಂದು ಮಧ್ಯಾಹ್ನ 3 ಗಂಟೆಗೆ ರಂಗಮಂದಿರಲ್ಲಿ ಕಾಮಗಾರಿಯ ಕುರಿತು ಸಾರ್ವಜನಿಕರಿಂದ  ಅಹವಾಲು ಸ್ವೀಕರಿಸುವ  ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಮೆಸ್ಕಾಂ,  ಜಲಮಂಡಳಿ ಮತ್ತು ನೈರ್ಮಲೀಕರಣ ಇಲಾಖೆ, ಮಹಾನಗರ ಪಾಲಿಕೆ ಇನ್ನೀತರ ಭಾಗೀದಾರ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಾಗಲಿದ್ದಾರೆ.

ಈ ಸಭೆಗೆ ಸಾರ್ವಜನಿಕರು, ಸಂಘ ಸಂಸ್ಥೆಗಳವರು ಆಗಮಿಸಿ ತಮ್ಮ ಕುಂದುಕೊರತೆಗಳನ್ನ ಲಿಖಿತವಾಗಿಯಾಗಲಿ ಅಥವಾ ಮೇಲ್ ಮೂಲಕವಾಗಿಯಾಗಲೀ ಅಥವಾ ಖುದ್ದಾಗಿ ಆಗಲಿ ಸಲ್ಲಿಸಲು ಈ ಮೂಲಕ ಕೋರಲಾಗಿದೆ. ಮೇಲ್ ವಿಳಾಸ-shimogasmartcity@gmail.com ಗೆ ಸೆ.011 ರ ಒಳಗೆ ಸಲ್ಲಿಸಬಹುದು.

ವಾಟ್ಸಪ್ ನಂಬರ್-9480022672 ಗೆ ಸಂಪರ್ಕಿಸಬಹುದಾಗಿದೆ.

Related Articles

Leave a Reply

Your email address will not be published. Required fields are marked *

Back to top button